ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕ

Syed Mushtaq Ali Trophy: Karnataka cruise to fourth win

ಕಟಕ್, ಫೆಬ್ರವರಿ 25: ಕಟಕ್‌ನ ಡ್ರೀಮ್ಸ್ ಗ್ರೌಂಡ್‌ನಲ್ಲಿ ಸೋಮವಾರ (ಫೆಬ್ರವರಿ 25) ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕರ್ನಾಟಕ vs ಮಿಜೋರಾಂ ನಡುವಿನ 4ನೇ ಸುತ್ತಿನ ಗ್ರೂಪ್ ಡಿ ಟಿ20 ಪಂದ್ಯದಲ್ಲಿ ಕರ್ನಾಟಕ ತಂಡ 137 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಕರುಣ್ ನಾಯರ್ ಮತ್ತು ರೋಶನ್ ಕದಮ್ ಸ್ಫೋಟಕ ಅರ್ಧಶತಕದಿಂದ ರಾಜ್ಯ ತಂಡ ಸುಲಭ ಗೆಲುವು ದಾಖಲಿಸಿತು (ಸಾಂದರ್ಭಿಕ ಚಿತ್ರ).

ಧೋನಿ ಪರ ಆಸೀಸ್ ಸ್ಟಾರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದೇಕೆ?!ಧೋನಿ ಪರ ಆಸೀಸ್ ಸ್ಟಾರ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದೇಕೆ?!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ರೋಶನ್ 78, ಮಯಾಂಕ್ ಅಗರ್ವಾಲ್ 20, ಕರುಣ್ 71, ನಾಯಕ ಮನೀಶ್ ಪಾಂಡೆ ಅಜೇಯ 33 ರನ್ ಸೇರಿಸಿದರು. ಕರ್ನಾಟಕ 20 ಓವರ್‌ಗೆ 4 ವಿಕೆಟ್ ಕಳೆದು 242 ರನ್ ಗಳಿಸಿತು.

ಚೇಸಿಂಗ್‌ಗೆ ಇಳಿದ ಮಿಜೋರಾಂನಿಂದ ಆರಂಭಿಕ ಆಟಗಾರ, ನಾಯಕ ತರುವಾರ್ ಕೊಹ್ಲಿ 36, ಅಖಿಲ್ ರಜಪೂತ್ 41 ರನ್ ಮಾತ್ರ ಗಮನಾರ್ಹವೆನಿಸಿತು. ಇತ್ತ ಕರ್ನಾಟಕ ಮಾರಕ ಬೌಲಿಂಗ್‌ ಕೂಡ ಪ್ರದರ್ಶಿಸಿದ್ದರಿಂದ ಮಿಜೋರಾಂ 20 ಓವರ್‌ಗೆ 6 ವಿಕೆಟ್ ನಷ್ಟದೊಂದಿಗೆ 105 ರನ್ ಗಳಿಸಿ ಶರಣಾಯಿತು.

ರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿ

ಮಿಜೋರಾಂ ಇನ್ನಿಂಗ್ಸ್‌ನಲ್ಲಿ ರಾಜ್ಯದ ಶ್ರೇಯಸ್ ಗೋಪಾಲ್ ಕೇವಲ 8 ರನ್ನಿಗೆ 4 ವಿಕೆಟ್ ಕೆಡವಿ ಮಿಂಚಿದರು. ಈ ಗೆಲುವಿನೊಂದಿಗೆ ಕರ್ನಾಟಕ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳನ್ನು ಕಂಡಂತಾಗಿದೆ. ಗ್ರೂಪ್‌ ಡಿ ಅಂಕಪಟ್ಟಿಯಲ್ಲಿ ಕರ್ನಾಟಕ ಒಟ್ಟು 16 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

Story first published: Monday, February 25, 2019, 19:55 [IST]
Other articles published on Feb 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X