ಪಂದ್ಯದ ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 (ಕರುಣ್ ನಾಯರ್ 77, ಕೆ.ಗೌತಮ್ 57; ರವಿಕಿರಣ್ 33ಕ್ಕೆ2)
ಹೈದರಾ ಬಾದ್ :30 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 203 (ತನ್ಮಯ್ ಅಗರವಾಲ್ 38ರನ್, ಅಕ್ಷತ್ ರೆಡ್ಡಿ 70, ಬಿ.ಸಂದೀಪ್ 34; ಸ್ಟುವರ್ಟ್ ಬಿನ್ನಿ 29ಕ್ಕೆ3 ಕೊನೆ ಓವರ್ ನಲ್ಲಿ 2 ವಿಕೆಟ್ )
|
ಪಂದ್ಯದ ರೋಚಕ ಕೊನೆ ಓವರ್
ಪಂದ್ಯದ ಕೊನೆ ಓವರ್ ನಲ್ಲಿ ಹೈದರಾಬಾದಿಗೆ ಗೆಲ್ಲಲು 6 ಎಸೆತಗಳಲ್ಲಿ 8 ರನ್ ಬೇಕಿತ್ತು. ನೋಬಾಲ್ ನಲ್ಲಿ ವಿಕೆಟ್ ಬಿತ್ತು. ಕರ್ನಾಟಕದ ವಿಕೆಟ್ ಕೀಪರ್ ಸಿಎಂ ಗೌತಮ್ ಎರಡು ಅದ್ಭುತ ಗೌತಮ್ ಕ್ಯಾಚ್ ಹಿಡಿದರು, ಬಿನ್ನಿ ಬೌಲಿಂಗ್ ಮೆಚ್ಚುಗೆ ಪಡೆಯಿತು.
|
ಕರುಣ್ ನಾಯರ್ ಟ್ವೀಟ್
ಕರುಣ್ ನಾಯರ್ ಮತ್ತು ಕೆ.ಗೌತಮ್ 131 ರನ್ಗಳ ಜೊತೆಯಾಟ ಆಡಿದರು.ಕರುಣ್ ನಾಯರ್ 42 ಎಸೆತಗಳಲ್ಲಿ 77 ರನ್ ಗಳಿಸಿದರು. ಒಂದು ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿದರೆ, ಗೌತಮ್ 31 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡ 57 ರನ್ ಗಳಿಸಿದರು
|
ರಾಯುಡು ಪ್ರತಿಭಟನೆ ಬಗ್ಗೆ ಚರ್ಚೆ
ಕರ್ನಾಟಕದ ಇನ್ನಿಂಗ್ಸ್ ವೇಳೆಯಲ್ಲಿ ಹೈದರಾಬಾದಿನ ಫೀಲ್ಡರ್ ರೊಬ್ಬರು ಬೌಂಡರಿ ಗೆರೆ ತುಳಿದು ಫೀಲ್ಡ್ ಮಾಡಿದ್ದರು. ಆದರೆ, ಇದು ಅಂಪೈರ್ ಗಳ ಗಮನಕ್ಕೆ ಬಂದಿರಲಿಲ್ಲ. 2 ರನ್ ಮಾತ್ರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ ವಿನಯ್ ಕುಮಾರ್, ಹೈದರಾಬಾದ್ ಚೇಸ್ ಶುರುವಾಗುವುದರೊಳಗೆ 2ರನ್ ಸೇರಿಸುವಂತೆ ಅಂಪೈರ್ ಗಳನ್ನು ಕೇಳಿಕೊಂಡರು. ನ್ಯಾಯಯುತವಾದ ಬೇಡಿಕೆಯನ್ನು ಮನ್ನಿಸಿದರು, ಹೀಗಾಗಿ 205ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಪಂದ್ಯ ಸೋತಿದ್ದರಿಂದ ರಾಯುಡು ಈ ಬಗ್ಗೆ ಮತ್ತೆ ಕಿತ್ತಾಟ ಶುರು ಮಾಡಿದರು.