15 ಆಟಗಾರರು, 8 ಅಧಿಕಾರಿಗಳಿಗೆ ಅನುಮತಿ
"ಕೋವಿಡ್-19 ಭೀತಿಯ ಕಾರಣ ಮತ್ತು ಬಯೋ ಬಬಲ್ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳು ತಮ್ಮ ತಂಡಗಳ ಜೊತೆ ಹೆಚ್ಚುವರಿ ಆಟಗಾರನ್ನು ಕರೆತರಲು ಅನುಮತಿ ನೀಡಿದೆ. ಬರುವ ಹೆಚ್ಚುವರಿ ಆಟಗಾರರ ಖರ್ಚುವೆಚ್ಚಗಳನ್ನು ನೀವೇ ಭರಿಸಬೇಕಾಗುತ್ತದೆ ಅನ್ನೋದನ್ನು ಐಸಿಸಿ ಕೂಡ ಹೇಳಿದೆ. ಐಸಿಸಿ ಕೇವಲ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳ ವೆಚ್ಚ ಮಾತ್ರ ಐಸಿಸಿ ಭರಿಸಲಿದೆ," ಎಂದು ಪಿಸಿಬಿ ತಿಳಿಸಿದೆ. 2016ರ ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಮೊದಲ ಈ ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ದುಬೈ ಅಬುದಾಬಿ ಮತ್ತು ಶಾರ್ಜಾ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳನ್ನು ಸೇರಿಸಿ 8 ರಾಷ್ಟ್ರಗಳ ಕ್ವಾಲಿಫೈಯಿಂಗ್ ಟೂರ್ನಮೆಂಟ್ ಸೆಪ್ಟೆಂಬರ್ 23ರಿಂದ ಓಮನ್ ಮತ್ತು ಯುಎಇಯ ಒಂದು ತಾಣದಲ್ಲಿ ನಡೆಯಲಿದೆ.
15 ಜನರ ಸಂಭಾವ್ಯ ಭಾರತೀಯ ತಂಡ
(ಟಿ20 ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಟೀಂ ಇಂಡಿಯಾ ಸೇರಬಲ್ಲ ಸಂಭಾವ್ಯ 15 ಆಟಗಾರರ ಪಟ್ಟಿ ಇಲ್ಲಿದೆ)
1. ರೋಹಿತ್ ಶರ್ಮ 2. ಶಿಖರ್ ಧವನ್ 3. ಕೆಎಲ್ ರಾಹುಲ್ 4. ವಿರಾಟ್ ಕೊಹ್ಲಿ (ನಾಯಕ) 5. ಶ್ರೇಯಸ್ ಅಯ್ಯರ್ 6. ಸಂಜು ಸಾಮ್ಸನ್ (ವಿಕೆಟ್ ಕೀಪರ್) 7. ರಿಷಬ್ ಪಂತ್ (ವಿಕೆಟ್ ಕೀಪರ್) 8. ಹಾರ್ದಿಕ್ ಪಾಂಡ್ಯ 9. ರವೀಂದ್ರ ಜಡೇಜ 10. ಯುಜುವೇಂದ್ರ ಚಾಹಲ್ 11. ಮೊಹಮ್ಮದ್ ಶಮಿ 12. ಜಸ್ ಪ್ರೀತ್ ಬೂಮ್ರಾ 13. ವಾಷಿಂಗ್ಟನ್ ಸುಂದರ್ 14. ದೀಪಕ್ ಚಾಹರ್ 15. ನವದೀಪ್ ಸೈನಿ.
* ಟಿ20 ವಿಶ್ವಕಪ್ 2021ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲೆಂಡ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಪಾಲ್ಗೊಳ್ಳಲಿವೆ.
ಎಷ್ಟು ಆಟಗಾರರು ಬೇಕನ್ನೋದು ಆಯಾ ಬೋರ್ಡ್ಗಳಿಗೆ ಬಿಟ್ಟಿದ್ದು
ಕೋವಿಡ್-19 ಪಾಸಿಟಿವ್ ಬಂದು ತಂಡದಿಂದ ಆಟಗಾರರು ಹೊರ ಬೀಳುವ ಭೀತಿ ಮತ್ತು ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿಯುವ ಭೀತಿ ಇರುವುದರಿಂದ ತನ್ನ ಮುಖ್ಯ ತಂಡದ ಜೊತೆಗೆ ಎಷ್ಟು ಆಟಗಾರರನ್ನು ಕರೆದೊಯ್ಯಬೇಕು ಅನ್ನೋದು ಆಯಾ ಕ್ರಿಕೆಟ್ ಬೋರ್ಡ್ಗಳಿಗೆ ಬಿಟ್ಟಿದ್ದು. ಹೆಚ್ಚುವರಿ ಆಟಗಾರರನ್ನು ಕೊಂಡೊಯ್ದರೆ ತಂಡಕ್ಕೆ ಬದಲಿ ಆಟಗಾರರ ಅವಶ್ಯಕತೆಯಿದ್ದಾಗ ಆಟಗಾರರನ್ನು ತಂದಡಿಂದ ಬದಲಾಯಿಸಿಕೊಳ್ಳಬಹುದು," ಎಂದು ಪಿಸಿಬಿ ಹೇಳಿದೆ. ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಕ್ವಾರಂಟೈನ್ ಶುರುವಾಗಲು ಇನ್ನು 5 ದಿನಗಳು ಬಾಕಿಯಿರುವವರೆಗೂ ಅಂತಿಮ ಕ್ಷಣದವರೆಗೆ ತಂಡಗಳಿಗೆ 15 ಜನರ ತಂಡವನ್ನು ನಿರ್ಧರಿಸಲು ಅವಕಾಶವಿದೆ ಎಂದು ಐಸಿಸಿ ಹೇಳಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ. ಅಸಲಿಗೆ ಈ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಭಾರತದಲ್ಲಿ ಕೋವಿಡ್-19 ಭೀತಿ ಶುರುವಾಗಿದ್ದರಿಂದ ಟೂರ್ನಿ ಭಾರತಕ್ಕೆ ಬದಲು ಯುಎಇಗೆ ಸ್ಥಳಾಂತರಗೊಂಡಿದೆ. ಆದರೆ ಟೂರ್ನಿಯ ಆಯೋಜನೆಯ ಜವಾಬ್ದಾರಿ ಭಾರತವೇ ಇರಿಸಿಕೊಂಡಿದೆ.