"ಮಾರ್ಗದರ್ಶಕನಾಗಿ ಎಂಎಸ್ ಧೋನಿ ಎಲ್ಲವನ್ನು ಸರಿಪಡಿಸಲಾಗುವುದಿಲ್ಲ"
"ಮಾರ್ಗದರ್ಶಕನಾಗಿ ಎಂಎಸ್ ಧೋನಿ ಹೆಚ್ಚಿನ ಕೆಲಸ ನಿರ್ವಹಿಸುವುದು ಕಷ್ಟ. ಟಿ ಟ್ವೆಂಟಿ ಪಂದ್ಯಗಳು ವೇಗವಾಗಿ ನಡೆಯುವುದರಿಂದ ಡ್ರೆಸಿಂಗ್ ರೂಮ್ನಲ್ಲಿ ಆಟಗಾರರಿಗೆ ಅಗತ್ಯವಿದ್ದ ಸಲಹೆಗಳನ್ನು ನೀಡಬಹುದೇ ಹೊರತು ಪಂದ್ಯದುದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡುವುದು ಅಸಾಧ್ಯ. ಇನ್ನುಳಿದಂತೆ ಟೈಮ್ ಔಟ್ ಸಂದರ್ಭದಲ್ಲಿ ಒಂದೆರಡು ನಿಮಿಷಗಳ ಕಾಲ ಎಂಎಸ್ ಧೋನಿ ಬೌಲರ್ಗಳ ಜೊತೆ ಚರ್ಚಿಸಬಹುದು ಬಿಟ್ಟರೆ ಫೀಲ್ಡ್ನಲ್ಲಿದ್ದು ಸಲಹೆ ನೀಡಲು ಆಗುವುದಿಲ್ಲ. ಹೀಗಾಗಿ ಆಟಗಾರರು ಒತ್ತಡವನ್ನು ಎದುರಿಸಿ ಯಾವ ರೀತಿ ಪ್ರದರ್ಶನ ನೀಡುತ್ತಾರೋ ಆ ರೀತಿಯ ಫಲಿತಾಂಶ ಸಿಗಲಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
"ನಾಯಕನಾದವನು ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಸಾಲದು"
"ನಾಯಕನಾದವನು ತನ್ನ ಬಗ್ಗೆ ಮಾತ್ರ ಯೋಚಿಸಿದರೆ ಸಾಲುವುದಿಲ್ಲ. ಕೆಟ್ಟ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್ಮನ್ ಬಳಿ ಚರ್ಚೆಯನ್ನು ನಡೆಸಬೇಕು ಹಾಗೂ ಬೌಲರ್ಗಳ ಜೊತೆ ನಿರಂತರ ಚರ್ಚೆಯಲ್ಲಿದ್ದು ಪಂದ್ಯದ ಗೆಲುವಿಗೆ ಬೇಕಾದ ತಂತ್ರಗಳನ್ನು ಹೆಣೆಯಬೇಕು. ಇಷ್ಟೆಲ್ಲಾ ಜವಾಬ್ದಾರಿ ಇರುವ ನಾಯಕ ತನ್ನ ಫಾರ್ಮ್ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನಾಯಕತ್ವದ ಜವಾಬ್ದಾರಿ ಇಲ್ಲದೆ ಇರುವಾಗ ತನ್ನ ವೈಯಕ್ತಿಕ ಪ್ರದರ್ಶನವನ್ನು ತೋರಿಸಬಹುದು. ಹೀಗಾಗಿ ನನ್ನ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ನಾಯಕತ್ವದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ತನ್ನ ಫಾರ್ಮ್ ಬಗ್ಗೆ ಗಮನ ಕೊಡುವುದು ಉತ್ತಮ" ಎಂದು ವಿರಾಟ್ ಕೊಹ್ಲಿಗೆ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಸೂಪರ್ 12 ಸುತ್ತಿನಲ್ಲಿ ಭಾರತದ ಪಂದ್ಯಗಳು
ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೂಪರ್ 12 ಹಂತದಲ್ಲಿ ಕಣಕ್ಕಿಳಿಯಲಿರುವ ಪಂದ್ಯಗಳ ಪಟ್ಟಿ ಈ ಕೆಳಕಂಡಂತಿದೆ.
1. ಭಾರತ vs ಪಾಕಿಸ್ತಾನ - ಅಕ್ಟೋಬರ್ 24
2. ಭಾರತ vs ನ್ಯೂಜಿಲೆಂಡ್ - ಅಕ್ಟೋಬರ್ 31
3. ಭಾರತ vs ಅಫ್ಘಾನಿಸ್ತಾನ - ನವೆಂಬರ್ 3
4. ಭಾರತ vs ಸ್ಕಾಟ್ಲೆಂಡ್ - ನವೆಂಬರ್ 5
5. ಭಾರತ vs ನಮೀಬಿಯಾ - ನವೆಂಬರ್ 8