ದೀಪಕ್ ಚಹಾರ್ ಟೀಮ್ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು
ಆದರೆ, ದೀಪಕ್ ಚಹಾರ್ 2022ರ ಏಷ್ಯಾ ಕಪ್ಗೆ ಸ್ಟ್ಯಾಂಡ್-ಬೈ ಆಟಗಾರನಾಗಿ ಭಾರತೀಯ ತಂಡಕ್ಕೆ ಮರಳಿದರು ಮತ್ತು ಜಿಂಬಾಬ್ವೆ ಸರಣಿಯ ಏಕದಿನ ತಂಡದಲ್ಲಿಯೂ ಸಹ ಅವರನ್ನು ಹೆಸರಿಸಲಾಗಿದೆ. "ನಾವು ಕೊನೆಯ ಬಾರಿಗೆ ದೀಪಕ್ ಚಹರ್ ಅವರನ್ನು ತಂಡದಲ್ಲಿ ನೋಡಿ ಬಹಳ ಸಮಯವಾಗಿದೆ. ಅವರು ಕೊನೆಯ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಆಲ್ರೌಂಡರ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿದರು. ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರು ಟೀಮ್ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಬಹುದು. ಅವರನ್ನು ಆಯ್ಕೆ ಮಾಡಲಾಗುತ್ತದೆ. ಜಿಂಬಾಬ್ವೆ ಸರಣಿಯು ಅವರಿಗೆ ನಿರ್ಣಾಯಕವಾಗಿರುತ್ತದೆ," ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದರು.
ಆಲ್ರೌಂಡರ್ ದೀಪಕ್ ಹೂಡಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ
ಟಿ20 ವಿಶ್ವಕಪ್ ತಂಡಕ್ಕೆ ಯಾವ ಆಲ್ರೌಂಡರ್ ಸ್ಥಾನ ಪಡೆಯಬಹುದು ಎಂದು ಕೇಳಿದಾಗ ಮೊಹಮ್ಮದ್ ಕೈಫ್ ಅವರು ದೀಪಕ್ ಹೂಡಾ ಎಂಬ ಪ್ರಬಲ ಹೆಸರನ್ನು ಆಯ್ಕೆ ಮಾಡಿ ಹೀಗೆ ಹೇಳಿದ್ದಾರೆ, "ದೀಪಕ್ ಅವರು ಮಧ್ಯಮ ಆರ್ಡರ್ನಲ್ಲಿ ಮತ್ತು ಅಗ್ರ ಕ್ರಮಾಂಕದಲ್ಲಿಯೂ ಬ್ಯಾಟ್ ಮಾಡಬಲ್ಲ ವ್ಯಕ್ತಿ. ಅವರು ಇತ್ತೀಚಿನ ಸರಣಿಯಲ್ಲಿ ಕೆಲವು ಅದ್ಭುತ ಪ್ರದರ್ಶನಗಳನ್ನು ಆಡಿದ್ದಾರೆ. ಅವರು ಆಫ್-ಸ್ಪಿನ್ ಬೌಲ್ ಮಾಡುತ್ತಾರೆ ಮತ್ತು ಬ್ಯಾಟಿಂಗ್ನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ ಅವರನ್ನು ಪ್ರಬಲ ಆಯ್ಕೆಯನ್ನಾಗಿ ಮಾಡುತ್ತೇನೆ," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.
ಕುಲದೀಪ್ ಯಾದವ್ ಟಿ20 ವಿಶ್ವಕಪ್ ತಂಡಕ್ಕೆ ಪುನರಾಗಮನ
ಇನ್ನು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಿಸಿರುವುದರಿಂದ ಟಿ20 ತಂಡಕ್ಕೆ ಮರಳಬಹುದು ಎಂದು ಮೊಹಮ್ಮದ್ ಕೈಫ್ ಭಾವಿಸಿದ್ದಾರೆ. "ಕುಲದೀಪ್ ಐಪಿಎಲ್ 2022ರಲ್ಲಿ ಅದ್ಭುತ ಎಕಾನಮಿಯಲ್ಲಿ ನೀಡಿದ್ದರು. ಆದರೆ ಅವರ ಗಾಯದ ನಂತರ ಅವರು ಹೆಚ್ಚು ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಈಗ ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್ ಪಟ್ಟಿಯಲ್ಲಿ ಮುಂದಿದ್ದಾರೆ. ಆದರೆ ಕುಲದೀಪ್ ಇನ್ನೂ ಸರಣಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಪುನರಾಗಮನ ಮಾಡಬಹುದು," ಎಂದು ಮಾಜಿ ಬಲಗೈ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.