ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಗಾಯಕ್ಕೆ ಒಳಗಾಗಿದ್ದರು, ಒತ್ತಡದಲ್ಲಿ ಎರಡು ಪಂದ್ಯಗಳಲ್ಲಿ ಆಡಿದ ನಂತರ, ಗಾಯದ ಗಂಭೀರತೆ ಹೆಚ್ಚಾಗಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.
ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಅವರನ್ನು ಕ್ರಿಕೆಟ್ ಆಡಲು ಒತ್ತಾಯಿಸಲಾಗಿದೆ ಎಂದು ಜಾಫರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RSWS 2022: ಫೈನಲ್ ತಲುಪಿದ ಇಂಡಿಯಾ ಲೆಜೆಂಡ್ಸ್: ತಂಡದ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಸಂತಸ
ಆಸ್ಟ್ರೇಲಿಯಾ ವಿರುದ್ಧ ಎರಡುಪಂದ್ಯಗಳಲ್ಲಿ ಕಣಕ್ಕೆ
ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬುಮ್ರಾ ಪ್ರಭಾವಶಾಲಿ ಪ್ರದರ್ಶನವನ್ನು ನೀಡಿದರು, ಅದ್ಭುತವಾಗಿ ಯಾರ್ಕರ್ ಬೌಲಿಂಗ್ ಮಾಡುವ ಮೂಲಕ ಆರೋನ್ ಫಿಂಚ್ರನ್ನು ಔಟ್ ಮಾಡಿದರು. ಆದರೆ ಹೈದರಾಬಾದ್ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ನಾಲ್ಕು ಓವರ್ಗಳಲ್ಲಿ 50 ರನ್ಗಳನ್ನು ಬಿಟ್ಟುಕೊಟ್ಟರು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿದ್ದ ಬುಮ್ರಾ ಮೊದಲನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಎರಡನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಗುವಾಹಟಿಗೆ ತೆರಳಿದ್ದು, ಬುಮ್ರಾ ತಂಡದೊಂದಿಗೆ ತೆರಳಲಿಲ್ಲ.
ವಿಶ್ವಕಪ್ವರೆಗೆ ಅವರು ಮೈದಾನಕ್ಕೆ ಇಳಿಯಬಾರದಿತ್ತು
ಬುಮ್ರಾ ಆಸ್ಟ್ರೇಲಿಯ ವಿರುದ್ಧ ಟಿ20 ಪಂದ್ಯಗಳನ್ನು ಆಡಬಾರದಿತ್ತು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಅವರು ಚೇತರಿಸಿಕೊಳ್ಳಲು ಇನ್ನೂ ಅವಕಾಶ ಇತ್ತು, ವಿಶ್ವಕಪ್ ವೇಳೆಗೆ ಅವರು ಸಂಪೂರ್ಣವಾಗಿ ಸಿದ್ಧವಾಗಿರುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಬಹುಶಃ ಹಿನ್ನೋಟದಲ್ಲಿ, ಅವರು ಅವನನ್ನು ಆಸ್ಟ್ರೇಲಿಯ ವಿರುದ್ಧ ಆಡಲು ಧಾವಿಸಿದ್ದಾರೆಯೇ ಎಂದು ನಾನು ಭಾವಿಸುತ್ತೇನೆ. ಅವನು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿರಬಹುದು ಮತ್ತು ಬಹುಶಃ ವಿಶ್ವಕಪ್ಗೆ ತಯಾರಾಗಿರಬಹುದು. ಗಾಯದ ಗಂಭೀರತೆ ನನಗೆ ತಿಳಿದಿಲ್ಲ ಆದರೆ ಅದು ನನಗೆ ಅನಿಸುತ್ತದೆ, ಬಿಸಿಸಿಐ ಅವನನ್ನು ಆಡಲು ತುಂಬಾ ಮುಂಚೆಯೇ ತಳ್ಳಿದಂತಾಗಿದೆ ಆದ್ದರಿಂದ ಗಾಯ ಮರುಕಳಿಸಿದೆ ಎಂದು ಹೇಳಿದ್ದಾರೆ.
ಬುಮ್ರಾ ಸ್ಥಾನವನ್ನು ತುಂಬುವ ಬೌಲರ್
ಜಸ್ಪ್ರೀತ್ ಬುಮ್ರಾ ಗಾಯಗೊಂಡು ವಿಶ್ವಕಪ್ನಿಂದ ಹೊರಬಿದ್ದಿರುವುದು ಟೀಂ ಇಂಡಿಯಾ ಆಯ್ಕೆದಾರರಿಗೆ ತಲೆನೋವಾಗಿದೆ. ಅವರ ಬದಲಾಗಿ ಯಾವ ಆಟಗಾರರಿಗೆ ಮಣೆ ಹಾಕುತ್ತಾರೆ ಎಂದು ನೋಡಬೇಕಾಗಿದೆ.
ಅನುಭವದ ಆಧಾರದ ಮೇಲೆ ಮೊಹಮ್ಮದ್ ಶಮಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ದೀಪಕ್ ಚಹಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ತಂಡಕ್ಕೆ ಸೇರುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಲಾಗಿದೆ.