ಮುಂಬೈ, ಜೂ.01: ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿ ಸೇರಿದ್ದಾರೆ. ಸೋಮವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಅದರೆ, ರಾಹುಲ್ ದ್ರಾವಿಡ್ ಅವರ ಹೆಸರು ಎಲ್ಲೂ ಕಾಣಿಸಿಕೊಂಡಿಲ್ಲ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಜೂ.10ರಿಂದ ಆರಂಭಗೊಳ್ಳಲಿರುವ ಬಾಂಗ್ಲಾ ಪ್ರವಾಸಕ್ಕೆ ಟೀಂ ಇಂಡಿಯಾ ತೆರಳುವ ಮುನ್ನ ಹೊಸ ಕೋಚ್, ಹೊಸ ನಿರ್ದೇಶಕ, ಹೊಸ ಮುಖ್ಯ ಫಿಜಿಯೋಥೆರಪಿಸ್ಟ್ ನೇಮಕವಾಗಲಿದೆ. [ಜೂ.6ರಂದು ಟೀಂ ಇಂಡಿಯಾ ಹೊಸ ಕೋಚ್ ಘೋಷಣೆ]
Alert - @sachin_rt, @VVSLaxman281 and @SGanguly99 join BCCI Cricket Advisory Committee. Fortunate to avail the services of these legends
— BCCI (@BCCI) June 1, 2015