ಫ್ರಾಂಚೈಸಿ ಮಾರಾಟ ನಡೆದಿತ್ತು
ಐಪಿಎಲ್ನಲ್ಲಿ ಎಷ್ಟು ತಂಡಗಳು ಇರಬೇಕು ಯಾವೆಲ್ಲಾ ನಗರಗಳ ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮೊದಲೇ ನಿರ್ಧರಿಸಿಯಾಗಿತ್ತು. ಆಟಗಾರರ ವಿಂಗಡಣೆಗೂ ಮುನ್ನವೇ ತಂಡಗಳ ಫ್ರಾಂಚೈಸಿಯನ್ನು ಮಾರಾಟ ಮಾಡಿ ಆಗಿತ್ತು. ಹೀಗಾಗಿ ಆಟಗಾರರ ವಿಂಗಡಣೆಯ ಕುರಿತಾಗಿ ಫ್ರಾಂಚೈಸಿಗಳ ಜೊತೆಗೆ ನಿರಂತರ ಮಾತುಕತೆಯನ್ನು ನಡೆಸಲಾಗುತ್ತಿತ್ತು. ಹೇಗೆ ಆಟಗಾರರನ್ನು ಪಡೆಯಲು ಸಾಧ್ಯವಿದೆ ಎಂಬ ಚರ್ಚೆಗಳು ನಡೆಯುತ್ತಿತ್ತು ಎಂದು ಸುಂದರ್ ರಾಮನ್ ತಿಳಿಸಿದರು.
ಪ್ರಮುಖ ಆಟಗಾರರ ವಿಂಗಡಣೆಯಾಗಿತ್ತು
ಫ್ರಾಂಚೈಸಿಗಳ ಮಾರಾಟದ ಬಳಿಕ ಪ್ರಮುಖ ಆಟಗಾರನ್ನು ಅವರ ತವರೂರಿಗೆ ಅನುಗುಣವಾಗಿ ವಿಂಗಡಣೆ ಮಾಡಿ ಆಗಿತ್ತು. ಅದರ ಪ್ರಕಾರ ಮುಂಬೈ ತಂಡಕ್ಕೆ ಸಚಿನ್ ತೆಂಡೂಲ್ಕರ್, ಡೆಲ್ಲಿ ತಂಡಕ್ಕೆ ವೀರೇಂದ್ರ ಸೆಹ್ವಾಗ್, ಪಂಜಾಬ್ಗೆ ಯುವರಾಜ್ ಸಿಂಗ್, ಸೌರವ್ ಗಂಗೂಲಿ ಕೊಲ್ಕತ್ತಾ ತಂಡಕ್ಕೆ ಹಾಗೂ ಧೋನಿ ಮಾತ್ರ ತವರು ತಂಡವೇ ಇಲ್ಲದೆ ಇದ್ದರು ಎಂದು ಸುಂದರ್ ರಾಮನ್ ವಿವರಿಸಿದರು.
ಟೀ ಕುಡಿಯುತ್ತಾ ಬಂದಿತ್ತು ಹರಾಜು ಯೋಚನೆ
ಆಟಗಾರರ ವಿಂಗಡಣೆ ಹೇಗೆ ಎಂಬ ಪ್ರಶ್ನೆಗೆ ಸೂಕ್ತ ಮಾರ್ಗ ಯಾರಿಗೂ ಹೊಳೆದಿರಲಿಲ್ಲ. ಆಗ ಎಲ್ಲಾ ಫ್ರಾಂಚೈಸಿಗಳ ಜೊತೆಗೆ ಯಾವೆಲ್ಲಾ ಸಾಧ್ಯತೆಗಳು ಇದೆ ಎಂಬುದಾಗಿ ನೂರಾರು ಮಾರ್ಗಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯುತ್ತಿತ್ತು ಆದರೆ ಯಾವುದೂ ಅಂತಿಮವಾಗಿರಲಿಲ್ಲ. ಆಗ ಯಾವುದೋ ಒಂದು ಫ್ರಾಂಚೈಸಿ ಹರಾಜು ಮಾಡಿದರೆ ಹೇಗೆ ಎಂದು ತಮ್ಮ ಆಲೋಚನೆಯನ್ನು ಮುಂದಿಟ್ಟರು ಎಂದು ಯುಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಂದರ್ ರಾಮನ್ ಹೇಳಿದ್ದಾರೆ.
ಉತ್ತಮ ಆಲೋಚನೆಯಾಗಿತ್ತು
'ಯಾವ ಫ್ರಾಂಚೈಸಿ ಮಾಲಿಕರು ಈ ಆಲೋಚನೆಯನ್ನು ಆ ಸಂದರ್ಭದಲ್ಲಿ ನೀಡಿದರು ಎಂಬುದನ್ನು ನಾನು ಮರೆತಿದ್ದೇನೆ. ಆದರೆ ಈ ಬಗ್ಗೆ ಒಂದೆರಡು ನಿಮಿಷಗಳಕಾಲ ಚರ್ಚೆ ನಡೆಯಿತು, ಅದಾದ ಬಳಿಕ ನಾನು ಇದೊಂದು ಉತ್ತಮ ಯೋಚನೆ, ಇದು ಗ್ರಾಹಕರ ಆಸಕ್ತಿಯನ್ನು ಕೂಡ ಒಳಗೊಂಡಿರುತ್ತದೆ. ಅದೇ ಯಾವ ಆಟಗಾರರು ಯಾವ ತಂಡಕ್ಕೆ ಸೇರ್ಪಡೆಗೊಳ್ಳುತ್ತರೆ ಎಂಬುದನ್ನು ನಿರ್ಧರಿಸುತ್ತದೆ ಎಂದು ವಿವರಿಸಿದ್ದಾಗಿ ಸುಂದರ್ ರಾಮನ್ ಹೇಳಿದ್ದಾರೆ.