ಲಂಕಾ ಆಟಗಾರರಿಗೆ ಆರ್ಥರ್ ಸಲಹೆ
ಸಾಮಾಜಿಕ ಜಾಲತಾಣದಲ್ಲಿ ಕೆಲ ಮೂರ್ಖರು ಏನೂ ತಿಳಿಯದಿದ್ದರೂ ತಿಳಿದವರ ರೀತಿ ಕಾಲೆಳೆಯುತ್ತಿರುತ್ತಾರೆ, ಅಂತಹ ಮೂರ್ಖರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಲಂಕಾ ಆಟಗಾರರಿಗೆ ಮಿಕಿ ಆರ್ಥರ್ ಸಲಹೆ ನೀಡಿದ್ದಾರೆ. ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದು ಲಂಕಾ ಆಟಗಾರರಿಗೆ ಮಿಕಿ ಆರ್ಥರ್ ಹೇಳಿದ್ದಾರೆ.
ಭಾರತ ವಿರುದ್ಧದ ಸೋಲು ಕಂಗೆಡಿಸಿರುವುದಂತೂ ನಿಜ
ಲಂಕಾ ತಂಡ ಟೀಮ್ ಇಂಡಿಯಾ ವಿರುದ್ಧ ಸೋಲನ್ನು ಅನುಭವಿಸಿರುವುದು ಕೋಚ್ ಮಿಕಿ ಅರ್ಥರ್ ಅವರನ್ನು ಕಂಗೆಡಿಸಿರುವುದಂತೂ ನಿಜ. ಎರಡನೇ ಪಂದ್ಯದ ಸಮಯದಲ್ಲಿ ಲಂಕಾ ತಂಡದ ನಾಯಕ ದಸುನ್ ಶನಕ ಜೊತೆ ಕೋಚ್ ಮಿಕ್ಕಿ ಆರ್ಥರ್ ನಡೆದುಕೊಂಡ ರೀತಿಯೇ ಅವರು ಯಾವ ಮಟ್ಟಿಗೆ ಕಂಗೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.
ಟಿ ಟ್ವೆಂಟಿ ಮೂಲಕ ಸೇಡು ತೀರಿಸಿಕೊಳ್ಳುವತ್ತ ಲಂಕಾ ಚಿತ್ತ
ಭಾರತದ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ಸೋತ ಬಳಿಕ ಮುಂಬರುವ ಟಿ ಟ್ವೆಂಟಿ ಸರಣಿಯತ್ತ ಗಮನ ಹರಿಸಿದೆ. ಏಕದಿನ ಸರಣಿಯಲ್ಲಿ ಸೋತ ನೋವನ್ನು ಟಿ ಟ್ವೆಂಟಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ನೀಗಿಸಲು ಶ್ರೀಲಂಕಾ ತಂಡ ಹಾತೊರೆಯುತ್ತಿದೆ.