ಕೊಹ್ಲಿ ತಾನಾಗೇ ನಾಯಕತ್ವ ಬಿಡಲಿಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನ ನಂತರ ಟೀಮ್ ಇಂಡಿಯಾ ಕುರಿತು ಮಾತನಾಡಿರುವ ಶೋಯಬ್ ಅಖ್ತರ್ ತಂಡದಲ್ಲಿ ಮನಸ್ತಾಪವಿದೆ ಹಾಗೂ ಬಿರುಕುಗಳು ಮೂಡಿವೆ ಎಂದಿದ್ದಾರೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ಕೂಡ ಇದೇ ರೀತಿ ನಡೆದಿದ್ದು, ಕೊಹ್ಲಿ ತಾನಾಗಿಯೇ ನಾಯಕತ್ವವನ್ನು ಬಿಡಲಿಲ್ಲ ಬದಲಾಗಿ ಕೊಹ್ಲಿ ರಾಜೀನಾಮೆ ಸಲ್ಲಿಸುವಂತೆ ವಾತಾವರಣವನ್ನು ತಂಡದೊಳಗೆ ರಚಿಸಲಾಯಿತು ಹಾಗೂ ಕೊಹ್ಲಿ ರಾಜೀನಾಮೆ ಸಲ್ಲಿಸಲು ಹಲವಾರು ಕಾರಣಗಳಿವೆ ಆದರೆ ಅದನ್ನು ಗೌಪ್ಯತೆಯ ಕಾರಣದಿಂದಾಗಿ ನಾನು ತಿಳಿಸಲಾಗುವುದಿಲ್ಲ ಎಂದು ಶೋಯಬ್ ಅಖ್ತರ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಟೀಮ್ ಇಂಡಿಯಾಗೆ ಅವಮಾನ
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ತೀರಾ ಕಳಪೆ ಮಟ್ಟದ್ದಾಗಿದೆ ಎಂದಿರುವ ಶೋಯಬ್ ಅಕ್ತರ್ ಅದರಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿರುವುದು ಭಾರತ ಕ್ರಿಕೆಟ್ಗೆ ಅವಮಾನವಾಗಿದೆ ಎಂದಿದ್ದಾರೆ.
ಈ ಸಮಸ್ಯೆ ಬಗೆಹರಿಯಬೇಕಿದೆ
ಇನ್ನೂ ಮುಂದುವರೆದು ಮಾತನಾಡಿರುವ ಶೋಯಬ್ ಅಖ್ತರ್ ಬಿಸಿಸಿಐ, ಭಾರತ ತಂಡದ ಕೋಚ್ ಹಾಗೂ ಭಾರತ ತಂಡದ ನಾಯಕ ಒಂದೆಡೆ ಸೇರಿ ಈ ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ. ಹೀಗೆ ಚರ್ಚೆ ನಡೆಸುವುದರಿಂದ ತಂಡದಲ್ಲಿ ಉಂಟಾಗಿರುವ ಬಿರುಕನ್ನು ಸರಿಪಡಿಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡಬಹುದು ಎಂದು ಶೋಯಬ್ ಅಖ್ತರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.