ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಿಂಗ್ಸ್‌ ನಾಯಕನಾಗಿ ಕೆ.ಎಲ್ ರಾಹುಲ್ ಬದಲಿಗೆ ಈ 3 ಆಟಗಾರರಲ್ಲಿ ಯಾರು?

KL Rahul

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ಈಗಾಗಲೇ ವೇದಿಕೆ ಸಿದ್ದಗೊಳ್ಳುತ್ತಿದೆ. ಆಟಗಾರರ ಹರಾಜು ಪ್ರಕ್ರಿಯೆ ಪ್ರಾರಂಭಕ್ಕೂ ಮೊದಲು ಇಂದು ಫ್ರಾಂಚೈಸಿಗಳು ರೀಟೈನ್ ಆದ ಆಟಗಾರರ ಪಟ್ಟಿಯನ್ನ ಬಿಸಿಸಿಐಗೆ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಇದರ ನಡುವೆ ನಾಲ್ಕೈದು ಫ್ರಾಂಚೈಸಿಗಳು ಹೊಸ ನಾಯಕನ ಹುಡುಕಾಟದಲ್ಲಿವೆ.

ಹೊಸ ನಾಯಕನ ಹುಡುಕಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಸ್‌ಆರ್‌ಎಚ್‌ ಜೊತೆಗೆ ಪಂಜಾಬ್ ಕಿಂಗ್ಸ್‌ ಕೂಡ ಸೇರಿಕೊಂಡಿದೆ ಎನ್ನಲಾಗಿದೆ. ಕೆಎಲ್ ರಾಹುಲ್ ಅವರು ಫ್ರಾಂಚೈಸಿಗೆ ಪಾದಾರ್ಪಣೆ ಮಾಡಿದ ನಂತರ ಎಲ್ಲಾ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಸತತವಾಗಿ ರನ್ ಕಲೆಹಾಕಿರುವ ರಾಹುಲ್ ಕಳೆದ 4 ಸೀಸನ್‌ಗಳಲ್ಲಿ ಅಗ್ರ ಐದು ರನ್ ಸ್ಕೋರರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಆದರೆ ಕೆಲವು ವರದಿಗಳ ಪ್ರಕಾರ ಪಂಜಾಬ್ ಫ್ರಾಂಚೈಸಿಗಾಗಿ ಆಡುವುದನ್ನು ಮುಂದುವರಿಸಲು ಕೆ.ಎಲ್ ರಾಹುಲ್ ಆಸಕ್ತಿ ಹೊಂದಿಲ್ಲ , ಬೇರೆಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷ ಹರಾಜಿನಲ್ಲಿ ಫ್ರಾಂಚೈಸಿಗಳು ಭಾರತೀಯ ಆರಂಭಿಕ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರಾಹುಲ್‌ರನ್ನ ತೊಡಗಿಸಿಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ.

ಕೆ.ಎಲ್ ರಾಹುಲ್ ಮೇಲೆ ಲಕ್ನೋ ಫ್ರಾಂಚೈಸಿ ಕಣ್ಣು

ಕೆ.ಎಲ್ ರಾಹುಲ್ ಮೇಲೆ ಲಕ್ನೋ ಫ್ರಾಂಚೈಸಿ ಕಣ್ಣು

ಈಗಾಗಲೇ 8 ಹಳೆಯ ಐಪಿಎಲ್‌ ಫ್ರಾಂಚೈಸಿಗಳು IPL 2022 ಗಾಗಿ ಆಟಗಾರರ ಪಟ್ಟಿಯನ್ನ ಮಾಡಿಕೊಂಡಿವೆ. ಇದರ ನಡುವೆ ಆರ್‌ಸಿಬಿ ಸೇರಿದಂತೆ ಕೆಲ ತಂಡಗಳಷ್ಟೇ ಹೊಸ ನಾಯಕನ ಹುಡುಕಾಟದಲ್ಲಿವೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆ.ಎಲ್‌ ರಾಹುಲ್‌ರನ್ನ ಹೇಗಾದ್ರು ಪಡೆಯಬೇಕೆಂಬ ಯೋಜನೆ ಹಾಕಿಕೊಂಡಿವೆ. ಈಗಾಗಲೇ ರಾಹುಲ್ ಲಕ್ನೋ ಫ್ರಾಂಚೈಸಿ ನಾಯಕ ಎಂದೇ ಬಿಂಬಿತವಾಗಿದೆ.

ಹೀಗಾಗಿ ಪಂಜಾಬ್ ಕಿಂಗ್ಸ್‌ನ ಕೆ.ಎಲ್ ತಮ್ಮ ಫ್ರಾಂಚೈಸಿಯಿಂದ ತೊರೆಯುವಂತೆ ಲಕ್ನೋ ಫ್ರಾಂಚೈಸಿ ಮಾಡುತ್ತಿದೆ ಎಂದು ಬಿಸಿಸಿಐಗೆ ದೂರು ನೀಡಿವೆ. ಈ ಕುರಿತು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಈ ದೂರುಗಳನ್ನ ಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ. ಇದರ ನಡುವೆ ಒಂದು ವೇಳೆ ರಾಹುಲ್ ತಂಡವನ್ನ ತೊರೆದಿದ್ದೇ ಆದಲ್ಲಿ ಅವರ ಸ್ಥಾನವನ್ನ ತುಂಬಬಲ್ಲ ಮೂವರು ಆಟಗಾರರನ್ನ ಈ ಕೆಳಗೆ ತಿಳಿಸಲಾಗಿದೆ.

ಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರು

ಮಯಾಂಕ್ ಅಗರ್ವಾಲ್

ಮಯಾಂಕ್ ಅಗರ್ವಾಲ್

ಕಳೆದ ಕೆಲವು ವರ್ಷಗಳಿಂದ ಪಂಜಾಬ್ ಕಿಂಗ್ಸ್‌ ಪರವಾಗಿ ಸತತವಾಗಿ ರನ್ ಗಳಿಸಿದ ಕೆಎಲ್ ರಾಹುಲ್ ಹೊರತುಪಡಿಸಿ ಏಕೈಕ ಬ್ಯಾಟ್ಸ್‌ಮನ್ ಅಂದ್ರೆ ಅದು ಮಯಾಂಕ್ ಅಗರ್ವಾಲ್. ಅವರು ಪಂಜಾಬ್ ಪರ ಕೆ.ಎಲ್ ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟ ನೀಡಿದ್ದಾರೆ. ಆದ್ರೆ ದುರದೃಷ್ಟವಶಾತ್, ಅವರ ಮಿತ್ರ ಮುಂದಿನ ವರ್ಷದಿಂದ ತಂಡದಲ್ಲಿ ಇರುವುದಿಲ್ಲ ಮತ್ತು ಅವರು ಹೊಸ ಫ್ರಾಂಚೈಸಿಯಲ್ಲಿ ಇನ್ನಿಂಗ್ಸ್ ತೆರೆಯಬೇಕಾಗಬಹುದು.

ಕೆ.ಎಲ್ ರಾಹುಲ್ ಕೆಲ ಸಂದರ್ಭದಲ್ಲಿ ತಂಡದಿಂದ ಹೊರಬಿದ್ದಾಗ, ಮಯಾಂಕ್ ಅಗರ್ವಾಲ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದಾರೆ. ಕೆಎಲ್ ರಾಹುಲ್ ಫ್ರಾಂಚೈಸಿ ಬಿಟ್ಟು ಹೊರಹೋಗಿದ್ದೇ ಆದಲ್ಲಿ, ಮಯಾಂಕ್ ಅಗರ್ವಾಲ್ ಫ್ರಾಂಚೈಸಿಯ ಪೂರ್ಣ ಸಮಯದ ನಾಯಕನಾಗಲು ಉತ್ತಮ ಆಯ್ಕೆಯಾಗಿರಬಹುದು.

ಐಪಿಎಲ್ 2021 ರಲ್ಲಿ ಪಂಜಾಬ್ ಕಿಂಗ್ಸ್ ಪರ ಮಾಯಾಂಕ್ ಅಗರ್ವಾಲ್ 40.09 ಸರಾಸರಿ ಮತ್ತು 140.44 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟಾರೆ 441 ರನ್ ಗಳಿಸಿದರು.

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

2021ರ ಐಪಿಎಲ್ ಸೀಸನ್‌ನಲ್ಲಿ ಅರ್ಧದಲ್ಲೇ ನಾಯಕತ್ವ ಕಳೆದುಕೊಂಡಿದ್ದಷ್ಟಲ್ಲದೆ, ತನ್ನ ಕಳಪೆ ಫಾರ್ಮ್‌ನಿಂದ ಆಡುವ 11ರ ಬಳಗದಿಂದಲೇ ಅವಕಾಶ ವಂಚಿತನಾದ ಡೇವಿಡ್ ವಾರ್ನರ್‌ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಆಟಗಾರರಲ್ಲಿ ಒಬ್ಬನಾಗಿದ್ದು, ನಾಯಕನ ಹುಡುಕಾಟದಲ್ಲಿರುವ ತಂಡಗಳು ಈತನ ಮೇಲೆ ಬಿಡ್‌ ಮಾಡುವುದರಲ್ಲಿ ಅನುಮಾನವಿಲ್ಲ.

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ, SRH 14 ಪಂದ್ಯಗಳಲ್ಲಿ ಕೇವಲ 3 ಪಂದ್ಯವನ್ನಷ್ಟೇ ಗೆದ್ದು ಲೀಗ್ ಹಂತದಲ್ಲೇ ಕೊನೆಗೊಂಡು ಪಾಯಿಂಟ್ಸ್ ಟೇಬಲ್‌ನ ಕೆಳಭಾಗದಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಸೀಸನ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಹೀಗಾಗಿ ಹರಾಜು ಪಟ್ಟಿಗೆ ಮರಳುವ ಸಾಧ್ಯತೆಯಿದೆ.

ಪಂಜಾಬ್ ಕಿಂಗ್ಸ್ ಮುಂದಿನ ವರ್ಷಕ್ಕೆ ಅವರನ್ನ ಖರೀದಿಸಲು ಆಸಕ್ತಿ ಹೊಂದಿರಬಹುದು. ಅವರು ತಂಡಕ್ಕೆ ಇನ್ನಿಂಗ್ಸ್ ತೆರೆಯುವುದು ಮಾತ್ರವಲ್ಲದೆ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವ ಸಾಮರ್ಥ್ಯ ಇರುವುದರಿಂದ ಕೆ.ಎಲ್ ರಾಹುಲ್ ಬದಲಿಗೆ ಸಮರ್ಥ ಆಯ್ಕೆಯಾಗಿದೆ.

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

ಡೆಲ್ಲಿ ಕ್ಯಾಪಿಟಲ್ಸ್ ಪರ ಆಡ್ತಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಸಲುವಾಗಿಯೇ ತಂಡದಿಂದ ಹೊರಬಂದು ಹರಾಜಿಗೆ ಇಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ದೆಹಲಿ ಕ್ಯಾಪಿಟಲ್ಸ್ ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನಾರ್ಟ್ಜೆ ಅವರನ್ನು ಮುಂದಿನ ವರ್ಷಕ್ಕೆ ನಾಲ್ಕು ರೀಟೈನ್ ಆಯ್ಕೆ ಮಾಡಿಕೊಂಡಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ದೃಢಪಡಿಸಿದೆ.

ಹೀಗಾಗಿ ಡೆಲ್ಲಿ ಕ್ಯಾಪಿಟಲ್‌ನ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಫ್ರಾಂಚೈಸಿಯಿಂದ ಬೇರ್ಪಡುವ ಸಾಧ್ಯತೆಯಿದೆ. ಅಯ್ಯರ್ ಇತ್ತೀಚೆಗೆ ಐಪಿಎಲ್‌ನಲ್ಲಿ ನಾಯಕತ್ವದ ಪಾತ್ರವನ್ನು ವಹಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರು 2021 ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸಬಹುದು.

ಅಯ್ಯರ್ ಪಂಜಾಬ್ ತಂಡವನ್ನ ಸೇರಿಕೊಂಡ್ರೆ, ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಬಹುದು. ಪಂಜಾಬ್ನ ಬ್ಯಾಟಿಂಗ್ ವಿಭಾಗದಲ್ಲಿ ಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊರತೆಯಿದೆ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸೇರಿಸುವುದರಿಂದ ಬಲಿಷ್ಠವಾಗಲಿದೆ.

ಭುಜದ ಗಾಯದಿಂದಾಗಿ ಶ್ರೇಯಸ್ ಅಯ್ಯರ್ IPL 2021 ರ ಮೊದಲಾರ್ಧದಲ್ಲಿ ಆಡಲಿಲ್ಲ. ಆದಾಗ್ಯೂ, ಅವರು ಟೂರ್ನಿಯ ಎರಡನೇ ಹಂತದಲ್ಲಿ ಡೆಲ್ಲಿ ಪರ ಆಡಿದರು. 8 ಪಂದ್ಯಗಳಲ್ಲಿ, ಅವರು ಸರಾಸರಿ 35ರಂತೆ ಮತ್ತು 102.33 ಸ್ಟ್ರೈಕ್ ರೇಟ್‌ನಲ್ಲಿ 175 ರನ್ ಗಳಿಸಿದರು.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಮತ್ತು ಅರ್ಧಶತಕ ಗಳಿಸಿರುವ ಅಯ್ಯರ್ ಭರ್ಜರಿ ಫಾರ್ಮ್‌ನಲ್ಲಿರುವುದರಿಂದ ಫ್ರಾಂಚೈಸಿಗಳು ಈತನ ಮೇಲೆ ಸಾಕಷ್ಟು ಬಿಡ್ ಮಾಡುವುದರಲ್ಲಿ ಅನುಮಾನವಿಲ್ಲ.

Story first published: Tuesday, November 30, 2021, 17:51 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X