ಅಲ್ಲಿನ ಪರಿಸ್ಥಿತಿಯೇ ಬೇರೆ
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಪ್ಟಿಲ್, 'ಅಲ್ಲಿನ ಪರಿಸ್ಥಿತಿಯೇ ಬೇರೆ. ಆದರೆ ಇಲ್ಲಿನ ಪರಿಸ್ಥಿತಿ ಬೇರೆ ಅಲ್ಲವೆ?ಇಲ್ಲಿ (ಆಕ್ಲೆಂಡ್ ಗ್ರೌಂಡ್ನಲ್ಲಿ) ಭಾರತದ ಬೌಲರ್ಗಳು ಇನ್ನೂ ದಾಳಿಯಾತ್ಮಕವಾಗಿ ಬದಲಾಗಲಿದ್ದಾರೆ ಎಂದು ನನಗನ್ನಿಸುತ್ತಿದೆ,' ಎಂದರು.
ಭಾರತದ ಸೋಲಿಗೆ ಕಾರಣ
ಹ್ಯಾಮಿಲ್ಟನ್ ಪಂದ್ಯದಲ್ಲಿ ಕಿವೀಸ್ ಗೆಲ್ಲಲು ಕಾರಣ ಸ್ವಿನ್ನರ್ಗಳು ದುಬಾರಿಯಾಗಿದ್ದು. ಆ ಪಂದ್ಯದಲ್ಲಿ ಕುಲದೀಪ್ ಯಾದವ್ 84 (2 ವಿಕೆಟ್), ರವೀಂದ್ರ ಜಡೇಜಾ 64 ರನ್ ನೀಡಿದ್ದರು. ಇವರಲ್ಲಿ ಕುಲದೀಪ್ 2 ವಿಕೆಟ್ ಪಡೆದಿದ್ದರೆ, ಜಡೇಜಾಗೆ ವಿಕೆಟ್ ಲಭಿಸಿರಲಿಲ್ಲ. ಎದುರಾಳಿಗೆ ರನ್ ಕಡಿವಾಣ ಹಾಕುವಲ್ಲಿ ವೇಗಿಗಳೂ ವೈಫಲ್ಯ ಅನುಭವಿಸಿದ್ದು ತಂಡದ ಹಿನ್ನಡೆಗೆ ಕಾರಣವಾಗಿತ್ತು.
ಭಾರತ ಸೋಲಿಗೆ ಗಪ್ಟಿಲ್ ಪ್ರತಿಕ್ರಿಯೆ
ಆರಂಭಿಕ ಏಕದಿನದಲ್ಲಿ ಭಾರತ ಸೋತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾರ್ಟಿನ್ ಗಪ್ಟಿಲ್, ವಿಶ್ವಶ್ರೇಷ್ಠ ತಂಡ ಭಾರತವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. 'ನೀವು ಭಾರತವನ್ನು ಸುಲಭವಾಗಿ ಪರಿಗಣಿಸುತ್ತೀರಿ ಎಂದು ಅನ್ನಿಸುತ್ತಿಲ್ಲ. ಯಾಕೆಂದರೆ ಅವರದ್ದು ವರ್ಲ್ಡ್ ಕ್ಲಾಸ್ ತಂಡ. ಅಲ್ಲಿ ಪಂದ್ಯ ಗೆಲ್ಲಿಸುವ ಬ್ಯಾಟ್ಸ್ಮನ್ಗಳು, ಬೌಲರ್ಗಳಿದ್ದಾರೆ,' ಎಂದು ಗಪ್ಟಿಲ್ ತನ್ನ ತಂಡವನ್ನು ಎಚ್ಚರಿಸಿದ್ದಾರೆ.
ನಮ್ಮ ಕೌಶಲ ಪ್ರದರ್ಶಿಸುತ್ತೇವೆ
ಮಾತು ಮುಂದುವರೆಸಿದ ಗಪ್ಟಿಲ್, 'ನಾಳಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತೇವೆ, ನಮ್ಮ ಕೌಶಲ ಪ್ರದರ್ಶಿಸುತ್ತೇವೆಂಬ ಭರವಸೆಯಿದೆ,' ಎಂದರು. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಶನಿವಾರ (ಫೆಬ್ರವರಿ 8) ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ 2ನೇ ಪಂದ್ಯವನ್ನಾಡಲಿದೆ. ಭಾರತೀಯ ಕಾಲಮಾನ 7.30 amಗೆ ಪಂದ್ಯ ಆರಂಭಗೊಳ್ಳಲಿದೆ.