ತಂಡದ ಆಯ್ಕೆ ಕುರಿತು ಟೀಕೆ ಎದುರಿಸುತ್ತಿರುವ ಧೋನಿ
ಹೌದು, ಪ್ಲೇಯಿಂಗ್ ಇಲೆವೆನ್ನಲ್ಲಿ ಧೋನಿ ಆಯ್ಕೆ ಕುರಿತು ಭಾರೀ ಟೀಕೆಗಳು ಎದುರಾಗಿವೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಧೊನಿ ಸೆಲೆಕ್ಷನ್ ಕುರಿತು ಟೀಕಿಸಿದ್ದಾರೆ. ಕೇದಾರ್ ಜಾಧವ್, ಪಿಯೂಷ್ ಚಾವ್ಲಾರಂತಹ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸಿದ್ರ ಕುರಿತು ಧೋನಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
'ಸೋಲಿನ ಬಳಿಕ ಧೋನಿ ಉತ್ತರಗಳನ್ನು ಇಂದು ನಾನು ಸ್ವೀಕರಿಸುವುದಿಲ್ಲ': ಕ್ರಿಸ್ ಶ್ರೀಕಾಂತ್ ಟೀಕೆ
ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ವಿನ್ನರ್ ಬೆಂಚ್ ಕಾದಿದ್ದೇ ಬಂತು!
ಐಪಿಎಲ್ 12ನೇ ಆವೃತ್ತಿಯ ಅತಿ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದ ಇಮ್ರಾನ್ ತಾಹಿರ್ ಅವರು ಮೊದಲ 10 ಪಂದ್ಯಗಳಿಗೆ ಬೆಂಚ್ನಲ್ಲೇ ಕುರಿಸಿದ ಧೋನಿ ಅವರ ಅನುಚಿತ ತಂಡದ ನಿರ್ವಹಣೆ ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ. ಮೂರು ಬಾರಿಯ ಚಾಂಪಿಯನ್ ಸಿಎಸ್ಕೆ ಕಳಪೆ ತಂಡದ ನಿರ್ವಹಣೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿರುವುದು ಗೋಚರಿಸುತ್ತಿದೆ.
ವಯಸ್ಸಾದ ತಂಡದೊಂದಿಗೆ ಮೂರನೇ ವರ್ಷ ಕಷ್ಟಕರ- ಸ್ಟೀಫನ್ ಫ್ಲೆಮಿಂಗ್
"ನೀವು ಮೂರು ವರ್ಷದ ಚಕ್ರವನ್ನು ನೋಡುತ್ತಿದ್ದರೆ - ನಾವು ಮೊದಲ ವರ್ಷವನ್ನು ಗೆದ್ದಿದ್ದೇವೆ(2018), ಕಳೆದ ವರ್ಷ ಕೊನೆಯ ಎಸೆತದಲ್ಲಿ ಚಾಂಪಿಯನ್ ಪಟ್ಟ ಕಳೆದುಕೊಂಡೆವು, ಮತ್ತುಈಗ ವಯಸ್ಸಾದ ತಂಡದೊಂದಿಗೆ ಮೂರನೇ ವರ್ಷ ಕಷ್ಟಕರವೆಂದು ನಾವು ಭಾವಿಸಿದ್ದೇವೆ. ಮತ್ತು ದುಬೈ [ಯುಎಇ] ನಮಗೆ ಸಂಪೂರ್ಣ ಹೊಸ ಅವಶ್ಯಕತೆಗಳನ್ನು ಸವಾಲು ಮಾಡಿದೆ, "ಎಂದು ಸಿಎಸ್ಕೆ ತಂಡದ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೇಮಿಂಗ್ ಹೇಳಿದ್ದಾರೆ.
IPL 2020: ಪಾಯಿಂಟ್ಸ್ ಟೇಬಲ್ ತಳ ಮುಟ್ಟಿದ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್
'ತಂಡದ ಫಾರ್ಮ್ ಕುಸಿದಾಗ ಸಕಾರಾತ್ಮಕವಾಗಿರುವುದು ತುಂಬಾ ಕಷ್ಟ'
"ನಾವು ಬಹುಶಃ ಪ್ರವೇಶಿಸಬಹುದಾದ ಹೊರಗಿನ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ, ಆದರೆ ನೀವು ಇತರ ಫಲಿತಾಂಶಗಳನ್ನು ಮತ್ತು ನಿಮ್ಮ ಸ್ವಂತ ತಂಡಕ್ಕೆ ರೂಪದ ಬದಲಾವಣೆಯನ್ನು ಅವಲಂಬಿಸುತ್ತಿರುವಾಗ, ಲವಲವಿಕೆಯ ಮತ್ತು ಸಕಾರಾತ್ಮಕವಾಗಿರುವುದು ತುಂಬಾ ಕಷ್ಟ," ಫ್ಲೆಮಿಂಗ್ ತನ್ನ ನಾಯಕನ ಭಾವನೆಗಳನ್ನು ಪ್ರತಿಧ್ವನಿಸುತ್ತಾ ಹೇಳಿದರು.
ಪಂದ್ಯ ಮುಗಿದ ಬಳಿಕ ನಾಯಕ ಧೋನಿ ತಂಡದ ಯುವ ಆಟಗಾರರಲ್ಲಿ ಕಿಡಿ ಕಾಣಿಸಲಿಲ್ಲ ಎಂದಿದ್ದರು. ಆದರೆ ಈ ಕುರಿತು ಟೀಕೆಗಳನ್ನು ಸಹ ಎದುರಿಸುತ್ತಿದ್ದು, ಕೇದಾರ್ ಜಾಧವ್ , ಪಿಯೂಷ್ ಚಾವ್ಲಾರಿಂದ ಕಿಡಿ ಕಾಣಿಸಿತೇ ಎಂದು ಭಾರತದ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್ ಧೋನಿ ಹೇಳಿಕೆಯನ್ನ ಪ್ರಶ್ನಿಸಿದ್ದಾರೆ.