— Prithvi Shaw (@PrithviShaw) July 30, 2019 |
ಕೆಮ್ಮಿಗೆ ಸಿರಪ್ ಸೇವಿಸಿದ್ದೆ
'2019ರ ನವೆಂಬರ್ ವರೆಗೆ ನನಗೆ ಕ್ರಿಕೆಟ್ ಆಡಲಾಗುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಫೆಬ್ರವರಿ 2019ರಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವಾಗ ತೀವ್ರ ಕೆಮ್ಮು ಮತ್ತು ಶೀತಕ್ಕೆ ನಾನು ಅಜಾಗರೂಕತೆಯಿಂದ ಸಿರಪ್ ಸೇವಿಸಿದ್ದೆ. ಇದರಲ್ಲಿ ನಿಷೇಧಿತ ಅಂಶವಿತ್ತು,' ಎಂದು ಟ್ವಿಟರ್ ಹೇಳಿಕೆ ಮೂಲಕ ಪೃಥ್ವಿ ತಿಳಿಸಿದ್ದಾರೆ.
ಆಡಬೇಕನ್ನೋ ತುಡಿತವಿತ್ತು
ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ಕಾಲು ನೋವಿನ ಸಮಸ್ಯೆಯಿಂದ ನರಳಿದ್ದೆ. ಆಟ ಆಡುವ ಬಗ್ಗೆ ನನ್ನಲ್ಲಿ ತುಡಿತವಿತ್ತು. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ನಾನು ಸಕ್ರಿಯ ಆಟಗಾರನಾಗಿರಲು ಬಯಸಿದ್ದೆ. ಆದ್ದರಿಂದ ಕೆಮ್ಮಿಗೆ ಮದ್ದು ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಿಸಲಿಲ್ಲ,' ಎಂದು ಪೃಥ್ವಿ ಹೇಳಿಕೊಂಡಿದ್ದಾರೆ.
ಬ್ಯಾನ್ ಆಗಿದ್ದ ಯೂಸುಫ್
ಪ್ರಚಲಿತ ಆಟಗಾರನೊಬ್ಬ ಇದೇ ರೀತಿ ಬ್ಯಾನ್ಗೆ ಒಳಗಾಗುತ್ತಿರುವುದು ಇದು ಎರಡನೇಸಾರಿ. ಇದಕ್ಕೂ ಮೊದಲು 2018ರ ಜನವರಿಯಲ್ಲಿ ಯೂಸುಫ್ ಪಠಾಣ್ ಬಿಸಿಸಿಐನಿಂದ ಐದು ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಪಠಾಣ್ ಕೂಡ ಡೋಪಿಂಗ್ಗಾಗಿ ನಿಶೇಧಿಸಲ್ಪಟ್ಟಿದ್ದರು. ಅವರ ದೇಹದಲ್ಲೂ ಕೆಮ್ಮಿನ ಸಿರಾಪ್ನಲ್ಲಿರುವ ಅಂಶ ಕಂಡುಬಂದಿತ್ತು.
ಈ ಸುದ್ದಿ ನನ್ನನ್ನು ಕಂಪಿಸಿತು
'ನನ್ನ ಪ್ರಾಮಾಣಿಕತೆ ಮತ್ತು ಅದೃಷ್ಟವನ್ನು ಒಪ್ಪಿಕೊಳ್ಳಬೇಕಾಗಿದೆ. ಹಿಂದಿನ ಟೂರ್ನಿಯಲ್ಲಿ ಗಾಯದ ಸಮಸ್ಯೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಈ ಸುದ್ದಿ ನನ್ನನ್ನು ಕಂಪಿಸಿತು. ಈ ವಿಚಾರವನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಈ ಘಟನೆ ಇತರರಿಗೂ ಕ್ರೀಡೆಯಲ್ಲಿನ ಭ್ರಾತೃತ್ವತೆಗೆ ಸ್ಫೂರ್ತಿಯಾಗಲಿದೆ. ಅನಾರೋಗ್ಯದ ವೇಳೆ ಮದ್ದು ತೆಗೆದುಕೊಳ್ಳುವಾಗಲೂ ಕ್ರೀಡಾಪಟುವೊಬ್ಬ ತೀರಾ ಎಚ್ಚರಿಕೆ ವಹಿಸಬೇಕು ಅನ್ನೋದು ಇದರಿಂದ ತಿಳಿಯುತ್ತಿದೆ,' ಎಂದು ಶಾ ತಿಳಿಸಿದ್ದಾರೆ.