ವಿಕೆಟ್ ಕೀಪರ್ - ಬ್ಯಾಟ್ಸ್ಮನ್ ಹುಡುಕಾಟ ನಡೆಯುತ್ತಿತ್ತು
2003ರ ವಿಶ್ವಕಪ್ ಬಳಿಕ ಭಾರತ ತಂಡಕ್ಕೆ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ನಿಭಾಯಿಸಬಲ್ಲ ಆಟಗಾರನನ್ನು ಹುಡುಕಲಾಗುತ್ತಿತ್ತು, ಅಚ್ಚುಕಟ್ಟಾಗಿ ವಿಕೆಟ್ ಕೀಪಿಂಗ್ ಮಾಡುವುದರ ಜೊತೆಗೆ 6 ಅಥವಾ 7ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಬಂದು 40-50 ರನ್ ಬಾರಿಸುವ ಸಾಮರ್ಥ್ಯವಿರುವಂತಹ ಆಟಗಾರನಿಗಾಗಿ ಹುಡುಕಾಟ ನಡೆದಿತ್ತು ಎಂದು ಕಿರಣ್ ಮೋರೆ ತಿಳಿಸಿದ್ದಾರೆ.
ಗಂಗೂಲಿಯನ್ನು ಒಪ್ಪಿಸಲು ಹತ್ತು ದಿನ ಬೇಕಾಯಿತು
ಹೀಗೆ ವಿಕೆಟ್ ಕೀಪರ್ - ಬ್ಯಾಟ್ಸ್ಮನ್ಗಾಗಿ ಹುಡುಕಾಟ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಎಂಎಸ್ ಧೋನಿಗೆ ಅವಕಾಶ ನೀಡಬೇಕೆಂದು ಕಿರಣ್ ಮೋರೆ ಪಟ್ಟು ಹಿಡಿದಿದ್ದರು. ಆದರೆ ಸೌರವ್ ಗಂಗೂಲಿ ಈ ಆಯ್ಕೆಗೆ ಒಪ್ಪಿಗೆ ನೀಡಿರಲಿಲ್ಲ, ಹೀಗಾಗಿ ಕಿರಣ್ ಮೋರೆ ಸತತವಾಗಿ ಹತ್ತು ದಿನಗಳ ಕಾಲ ಸೌರವ್ ಗಂಗೂಲಿಯನ್ನು ಒತ್ತಾಯಿಸಿದ ಬಳಿಕ ಎಂಎಸ್ ಧೋನಿಗೆ2004ರ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ನೀಡಲಾಯಿತು.
ಧೋನಿ ಸ್ಥಾನಕ್ಕೆ ದೀಪ್ದಾಸ್ ಗುಪ್ತಾ ಆಯ್ಕೆಯಾಗಿದ್ದರು
2003ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ದೀಪ್ದಾಸ್ ಗುಪ್ತಾ ಆಯ್ಕೆಯಾಗಿದ್ದರು. ಆದರೆ ಕಿರಣ್ ಮೋರೆ ಎಂಎಸ್ ಧೋನಿಗೇ ಆ ಸ್ಥಾನವನ್ನು ನೀಡಬೇಕೆಂದು ಪಟ್ಟು ಹಿಡಿದು ಅವಕಾಶವನ್ನು ಕೊಡಿಸಿದ್ದರು.
ದೇಶಿ ಕ್ರಿಕೆಟ್ನಲ್ಲಿ ಧೋನಿ ಆಟ ನೋಡಿ ಬೆರಗಾಗಿದ್ದ ಮೋರೆ
ಎಂಎಸ್ ಧೋನಿ ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿದ್ದ ಆಟವನ್ನು ನೋಡಿ ಕಿರಣ್ ಮೋರೆ ಬೆರಗಾಗಿದ್ದರು, ಹೀಗೆ ಕಿರಣ್ ಮೋರೆ ವೀಕ್ಷಿಸಿದ್ದ ಪಂದ್ಯದಲ್ಲಿ ಧೋನಿ ಆಡುತ್ತಿದ್ದ ತಂಡದ ಮೊತ್ತ 170 ರನ್ ಆಗಿತ್ತು, ಇದರಲ್ಲಿ ಧೋನಿ ವೈಯಕ್ತಿಕವಾಗಿ 130 ರನ್ ಸಿಡಿಸಿ ಮಿಂಚಿದ್ದರು ಎಂದು ಕಿರಣ್ ಮೋರೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.