5. ಚೊಚ್ಚಲ ಪಂದ್ಯದಲ್ಲೇ ಅಬ್ಬರ
ಯುವರಾಜ್ ಸಿಂಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ನ ಪ್ರಥಮ ಪಂದ್ಯದಲ್ಲೇ ತಾನು ಟೀಮ್ ಇಂಡಿಯಾದ ಭವಿಷ್ಯ ಎಂದು ಸಾರಿದವರು. ಪ್ರಥಮ ಪಂದ್ಯದಲ್ಲೇ ಯುವರಾಜ್ ಸಿಂಗ್ ಹೀರೋ ಆಗ ಮಿಂಚಿದರು. ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ 84 ರನ್ಗಳ ಅಮೂಲ್ಯ ಕೊಡುಗೆಯನ್ನು ನೀಡಿದ್ದರು. ಯುವರಾಜ್ ಸಿಂಗ್ ಅವರ ಈ ಸಾಧನೆಯಿಂದ ಈ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಲು ಸಾಧ್ಯವಾಗುತ್ತು. ಯುವರಾಜ್ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
2017ರಲ್ಲಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸ್ಕೋರ್
ವಿಶ್ವಕಪ್ ಗೆಲುವಿನ ನಂತರ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಅಲ್ಲೂ ಗೆದ್ದ ನಂತರ ಕ್ರಿಕೆಟ್ ಕೆರಿಯರ್ನಲ್ಲಿ ಕುಸಿತವನ್ನು ಅನುಭವಿಸಿದರು. ಮತ್ತೆ ಹರಸಾಹಸ ಪಟ್ಟು ಕಮ್ಬ್ಯಾಕ್ ಮಾಡಿದ ಯುವಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೇಷ್ಠ ಇನ್ನಿಂಗ್ಸನ್ನು ಆಡಿದರು. ಮಹೇಂದ್ರ ಸಿಂಗ್ ಧೋನಿ ಜೊತೆ ಕೂಡಿಕೊಂಡು ಏಕದಿನ ಕ್ರಿಕೆಟ್ನ ತನ್ನ ಸರ್ವಾಧಿಕ 150 ರನ್ಗಳ್ನು ಗಳಿಸಿದರು. ಇದು ಕೂಡ ಯುವರಾಜ್ ಸಿಂಗ್ ಕೆರಿಯರ್ನ ಒಂದು ಅದ್ಭುತ ಇನ್ನಿಂಗ್ಸ್ ಆಗಿದೆ.
ಆರು ಎಸೆತಕ್ಕೆ ಆರು ಸಿಕ್ಸರ್
2007ರ ವಿಶ್ವಕಪ್ ಹಲವಾರು ವಿಶೇಷ ಕಾರಣಗಳಿಗಾಗಿ ಸ್ಮರಣೀಯ. ಅದರಲ್ಲಿ ಒಂದು ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ ಸ್ಪೋಟಕ ಇನ್ನಿಂಗ್ಸ್. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ನ ವೇಗಿ ಸ್ಟುವರ್ಟ್ ಬ್ರಾಡ್ ಓವರ್ನ ಆಟೂ ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ಇತಿಹಾಸವನ್ನು ಬರೆದಿದ್ದರು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಕ್ಕೇ ಅರ್ಧಶತಕವನ್ನು ಪೂರೈಸಿದ್ದರು.
ನಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಚೇಸಿಂಗ್ ನಡೆದ ಪಂದ್ಯವಿದು. ಇಂಗ್ಲಂಡ್ ನೀಡಿದ್ದ 326ರನ್ಗಳ ಟಾರ್ಗೆಟನ್ನು ಬೆನ್ನತ್ತಿದ್ದ ಭಾರತ ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸೋಲನ್ನು ಖಚಿತ ಪಡಿಸಿಕೊಂಡಿತ್ತು. ಆದರೆ ಮೊಹಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಅಮೂಲ್ಯ ಆಟವನ್ನು ಪ್ರದರ್ಶಿಸಿದರು. ಕೈಫ್ ಜೊತೆಗೆ ಅತ್ಯಮೂಲ್ಯ 121 ರನ್ಗಳ ಜೊತೆಯಾಟವನ್ನು ಯುವರಾಜ್ ಸಿಂಗ್ ನೀಡಿದ್ದರು. ಅಮೂಲ್ಯ ಸಂದರ್ಭದಲ್ಲಿ ಯುವಿ 63 ರನ್ಗಳನ್ನು ಗಳಿಸಿ ಟೀಮ್ ಇಂಡಿಯಾ ಗೆಲ್ಲಲು ಮಹತ್ವದ ಪಾತ್ರ ನಿರ್ವಹಿಸಿದ್ದರು. ಈ ಗೆಲುವು ಭಾರತದ ಪಾಲಿಗೆ ಅತ್ಯಂತ ಸ್ಮರಣೀಯವಾಗಿದೆ.
2011ರ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಆಟಗಾರ
2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪಾಲು ಅತ್ಯಂತ ಮಹತ್ವದ್ದು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೂಲ್ಯ ಕಾಣಿಕೆಯನ್ನು ಟೀಮ್ ಇಂಡಿಯಾಗೆ ನೀಡಿದ್ದರು.ವಿಶ್ವಕಪ್ನ 9 ಪಂದ್ಯಗಳಲ್ಲಿ ಯುವಿ ಒಂದು ಶತಕ ನಾಲ್ಕು ಅರ್ಧ ಶತಕವನ್ನು ಸಿಡಿಸಿದ್ದರು. ಇದರ ಜೊತೆಗೆ ಬೌಲಿಂಗ್ನಲ್ಲೂ 15 ವಿಕೆಟ್ ಪಡೆದುಕೊಂಡಿದ್ದರು. ಈ ಒಟ್ಟಾರೆ ಪ್ರದರ್ಶನಕ್ಕೆ ಯುವರಾಜ್ ಸಿಂಗ್ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದರು.