ರಾಹುಲ್ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದು
"ಕೆ.ಎಲ್.ರಾಹುಲ್ ಗೆ ನೀಡಿದ ಎರಡೂ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ವಿಕೆಟ್ ಕೀಪಿಂಗ್ ಗಾಗಿ ಇನ್ನೊಬ್ಬರನ್ನು ಹನ್ನೊಂದು ಆಟಗಾರರ ತಂಡಕ್ಕೆ ಸೇರಿಸುವ ಅವಶ್ಯಕತೆ ನನಗೆ ಕಾಣಿಸುತ್ತಿಲ್ಲ" ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟ ಪಡಿಸಿದ್ದಾರೆ.
ಮುಂದಿನ ಎರಡು ಪಂದ್ಯಕ್ಕೆ ಕೊಹ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿಲ್ಲದಿಲ್ಲ
ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯನ್ನು ಭಾರತ ಈಗಾಗಲೇ ಗೆದ್ದಿರುವುದರಿಂದ, ಕೆಲವು ಆಟಗಾರರಿಗೆ, ಮುಂದಿನ ಎರಡು ಪಂದ್ಯಕ್ಕೆ ಕೊಹ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿಲ್ಲದಿಲ್ಲ. ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ನವದೀಪ್ ಸೈನಿ ಮುಂತಾದ ಆಟಗಾರರಿಗೆ ಅವಕಾಶ ಸಿಕ್ಕರೂ ಸಿಗಬಹುದು.
ಸಂಜು ಸ್ಯಾಮ್ಸನ್
ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಆಗಿ ಬಿಸಿಸಿಐ ಇಬ್ಬರನ್ನು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಆಯ್ಕೆ ಮಾಡಿತ್ತು. ಜೊತೆಗೆ, ಕೆ.ಎಲ್.ರಾಹುಲ್ ಪಾರ್ಟ್ ಟೈಮ್ ಕೀಪರ್ ಬೇರೆ. ಆಯ್ಕೆಯಾದ ಇಬ್ಬರು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು ಸಂಜು ಸ್ಯಾಮ್ಸನ್, ದೇಶೀಯ ಕ್ರಿಕೆಟ್ ನಲ್ಲಿ ಕೇರಳ ತಂಡವನ್ನು ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಸ್ಯಾಮ್ಸನ್ ಐಪಿಎಲ್ ನಲ್ಲಂತೂ ಪ್ರಚಂಡ ಫಾರ್ಮ್ ನಲ್ಲಿದ್ದರು.
ಬಿರುಸಿನ ಆಟಗಾರ, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರುವ ರಿಷಬ್ ಪಂತ್
ಇನ್ನೊಬ್ಬ ಯುವ ಬಿರುಸಿನ ಆಟಗಾರ, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರುವ ರಿಷಬ್ ಪಂತ್ ಕೂಡಾ ನ್ಯೂಜಿಲ್ಯಾಂಡ್ ಪ್ರವಾದಲ್ಲಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ದೆಹಲಿ ತಂಡಕ್ಕೆ ಮತ್ತು ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಆಡುವ ಪಂತ್ ಗೆ, ಸದ್ಯ, ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಅವಕಾಶ ಸಿಗುತ್ತಿಲ್ಲ.