ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಉಮೇಶ್ ಮಿಂಚು, ಕೇರಳ ಸೋಲಿಸಿ ಫೈನಲ್‌ ಪ್ರವೇಶಿಸಿದ ವಿದರ್ಭ

Umesh Yadav stars as Vidarbha beat Kerala to reach Ranji Trophy final

ವಯನಾಡ್, ಜನವರಿ 25: ಕೇರಳದ ವಯನಾಡ್‌ನ ಕೃಷ್ಣನಗರಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೇರಳವನ್ನು 11 ರನ್‌ನಿಂದ ಸೋಲಿಸಿದ ವಿದರ್ಭ ತಂಡ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ವಿದರ್ಭ ವೇಗಿ ಉಮೇಶ್ ಯಾದವ್ ಅದ್ಭುತ ಬೌಲಿಂಗ್ ಬೆಂಬಲದಿಂದ ತಂಡ ರೋಚಕ ಗೆಲುವು ದಾಖಲಿಸಿತು.

'ಸರ್ಫರಾಜ್ ಅನ್ನು ಕ್ಷಮಿಸಬಹುದು, ಆದರೆ ತಪ್ಪನ್ನು ಮರೆಮಾಚಲು ಸಾಧ್ಯವಿಲ್ಲ''ಸರ್ಫರಾಜ್ ಅನ್ನು ಕ್ಷಮಿಸಬಹುದು, ಆದರೆ ತಪ್ಪನ್ನು ಮರೆಮಾಚಲು ಸಾಧ್ಯವಿಲ್ಲ'

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೇರಳ, ಮೊದಲ ಇನ್ನಿಂಗ್ಸ್‌ನಲ್ಲಿ 28.4 ಓವರ್‌ಗೆ 106 ರನ್ ಬಾರಿಸಿತು. ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ನಾಯಕ ಫೈಝ್ ಫಝಲ್ 75 ರನ್ ಸೇರಿಸಿದ್ದರಿಂದ 52.4 ಓವರ್‌ಗಳಲ್ಲಿ 208 ಪೇರಿಸುವುದರೊಂದಿಗೆ ಮುನ್ನಡೆ ಸಾಧಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕೇರಳ ದುರ್ಬಲ ಬ್ಯಾಟಿಂಗ್‌ ಪ್ರದರ್ಶಿಸಿತು. ಅರುಣ್ ಕಾರ್ತಿಕ್ 36 ರನ್ ಬೆಂಬಲದೊಂದಿಗೆ ಸಚಿನ್ ಬೇಬಿ ನಾಯಕತ್ವದ ಕೇರಳ 24.5 ಓವರ್‌ಗೆ 91 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು.
ಹೀಗಾಗಿ ವಿದರ್ಭ ಒಂದು ಇನ್ನಿಂಗ್ಸ್‌ ಆಡದೆಯೇ ಗೆಲುವನ್ನಾಚರಿಸಿತು.

ರೊಚ್ಚಿಗೆದ್ದ ರೋಚ್, ಬರೀ 77 ರನ್‌ಗೆ ಟೆಸ್ಟ್ ಇನ್ನಿಂಗ್ಸ್‌ ಮುಗಿಸಿದ ಇಂಗ್ಲೆಂಡ್!ರೊಚ್ಚಿಗೆದ್ದ ರೋಚ್, ಬರೀ 77 ರನ್‌ಗೆ ಟೆಸ್ಟ್ ಇನ್ನಿಂಗ್ಸ್‌ ಮುಗಿಸಿದ ಇಂಗ್ಲೆಂಡ್!

ವಿದರ್ಭ ಗೆಲುವಿಗೆ ಮುಖ್ಯ ಕಾರಣ ಉಮೇಶ್ ಯಾದವ್. ಎರಡೂ ಇನ್ನಿಂಗ್ಸ್ ಗಳು ಸೇರಿ ಒಟ್ಟು 79 ರನ್ನಿಗೆ 12 ವಿಕೆಟ್‌ಗಳನ್ನು ಉಮೇಶ್ ಕಬಳಿಸಿದ್ದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಅಂದ್ಹಾಗೆ ಕೇರಳ ತಂಡ ಸೆಮಿಫೈನಲ್‌ಗೆ ಇದೇ ಮೊದಲಬಾರಿ ಪ್ರವೇಶಿಸಿತ್ತು.

Story first published: Friday, January 25, 2019, 17:20 [IST]
Other articles published on Jan 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X