ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ 5 ಪ್ರಮುಖ ಕ್ರಿಕೆಟಿಗರಿಗೆ ಈ ಅದೃಷ್ಟವೇ ಇಲ್ಲ!

Unlucky Players Of Ipl History Including Kl Rahul And Dinesh Karthik

ವಿಶ್ವದ ಅತಿ ವರ್ಣರಂಚಿತ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್. ಇದರಲ್ಲಿ ಆಟಗಾರರಿಗೆ ತಮ್ಮ ತವರು ನಗರದ ಫ್ರಾಂಚೈಸಿಯಲ್ಲಿ ಆಡಬೇಕೆಂಬ ಕನಸು ಎಲ್ಲಾ ಆಟಗಾರರಿಗೂ ಇರುತ್ತದೆ. ಹೆಚ್ಚಿನ ಎಲ್ಲಾ ಆಟಗಾರರೂ ಒಂದಲ್ಲಾ ಒಂದು ಬಾರಿ ಈ ಅವಕಾಶವನ್ನು ಗಳಿಸಿಕೊಂಡಿದ್ದಾರೆ.

ಆದರೆ ಅದರಲ್ಲೂ ಮುಖ್ಯವಾಗಿ ಐಪಿಎಲ್‌ನಲ್ಲಿ ದೊಡ್ಡ ತಾರೆಗಳೆನಿಸಿದ ಆಟಗಾರರು ತಮ್ಮ ತವರೂರಿನ ಫ್ರಾಂಚೈಸಿಯಲ್ಲಿ ಆಡಲು ಅವಕಾಶ ಸಿಕ್ಕರೂ ಅದನ್ನು ಮುನ್ನಡೆಸುವ ಅವಕಾಶವನ್ನು ಕಳೆದ 12 ಆವೃತ್ತಿಯಲ್ಲೂ ಪಡೆದುಕೊಂಡಿಲ್ಲ. ಕೆಲವರು ತವರು ಫ್ರಾಂಚೈಸಿಯಲ್ಲಿ ಆಡುವ ಅವಕಾಶವನ್ನೇ ಗಳಿಸಿಕೊಂಡಿಲ್ಲ.

ಈಗ ತವರೂರಿನ ಫ್ರಾಂಚೈಸಿಯಲ್ಲಿ ಆಡುವ ಅವಕಾಶವನ್ನು ಪಡೆಯದ ಐವರು ಸ್ಟಾರ್‌ ಆಟಗಾರರ ಬಗ್ಗೆ ಮುಂದೆ ಓದಿ..

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ದಶಕಗಳಿಗೂ ಹೆಚ್ಚುಕಾಲ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಆಟಗಾರ ಅಂದರೆ ಅದು ದಿನೇಶ್ ಕಾರ್ತಿಕ್. ಟಿ20 ಮಾದರಿಯಲ್ಲಿ ದಿನೇಶ್ ಕಾರ್ತಿಕ್ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. 2007 ವಿಶ್ವಕಪ್‌ ತಂಡದಲ್ಲೂ ದಿನೇಶ್ ಕಾರ್ತಿಕ್ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಚೆನ್ನೈ ಮೂಲದ ದಿನೇಶ್ ಕಾರ್ತಿಕ್ ತವರು ತಂಡವನ್ನು ಮುನ್ನಡೆಸುವ ಅವಕಾಶವನ್ನೇ ಪಡೆದುಕೊಂಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ತಂಡ ತನ್ನನ್ನು ಖರೀದಿಸಿಯೇ ತೀರುತ್ತದೆ ಎಂಬ ನಂಬಿಕೆಯಲ್ಲಿದ್ದು ಅದು ಹುಸಿಯಾದ ವಿಚಾರವನ್ನು ಹಂಚಿಕೊಂಡಿದ್ದರು. ದಿನೇಶ್ ಕಾರ್ತಿಕ್ ಬದಲಿಗೆ ಧೋನಿಯನ್ನು ಆಯ್ಕೆ ಮಾಡಿದ ಚೆನ್ನೈ ಫ್ರಾಂಚೈಸಿ ನಾಯಕನನ್ನಾಗಿ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಹಾಲಿ ನಾಯಕನಾಗಿದ್ದಾರೆ ದಿನೇಶ್ ಕಾರ್ತಿಕ್.

ಆರ್‌.ಅಶ್ವಿನ್

ಆರ್‌.ಅಶ್ವಿನ್

ಟೀಮ್ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಆರ್‌.ಅಶ್ವಿನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಚೆನ್ನೈ ಮೂಲದವರೇ ಆದ ಆರ್.ಅಶ್ವಿನ್ ಚೆನ್ನೈ ತಂಡದಲ್ಲಿ ತನ್ನ ಮೊದಲ ಅಭಿಯಾನವನ್ನು 2009ರಲ್ಲಿ ಆರಂಭಿಸಿದರಾದರೂ ನಾಯಕಾಗಿ ಧೋನಿ ಮುನ್ನಡೆಸುತ್ತಿದ್ದರು. 2015ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದ ಆರ್‌ಅಶ್ವಿನ್ ಚೆನ್ನೈ ನಿಷೇಧಕ್ಕೊಳಗಾದಾಗ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಸೇರ್ಪಡೆಗೊಂಡರು. ಅದಾದ ಬಳಿಕ 2018ರಲ್ಲಿ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಆದರೆ ತವರು ತಂಡವಾದ ಚೆನ್ನೈಯನ್ನು ಮುನ್ನಡೆಸುವ ಅವಕಾಶ ಆರ್‌.ಅಶ್ವಿನ್ ಪಾಲಿಗೆ ಸಿಗಲೇ ಇಲ್ಲ.

ಜಹೀರ್ ಖಾನ್

ಜಹೀರ್ ಖಾನ್

ಟೀಮ್ ಇಂಡಿಯಾದ ಮಾಜಿ ಆಟಗಾರ ಜಹೀರ್ ಖಾನ್ ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗದ ಬೌಲರ್. ಮಹಾರಾಷ್ಟ್ರ ಮೂಲದ ಜಹೀರ್ ಖಾನ್‌ ಕೂಡ ತವರು ತಂಡವನ್ನು ಮುನ್ನಡೆಸದ ದುರದೃಷ್ಟವಂತ ಆಟಗಾರ. ಮುಂಬೈ ತಂಡದಲ್ಲಿ ಜಹೀರ್ ಖಾನ್ ಮೂರು ಅವಧಿಯಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು, 2009, 2010 ಹಾಗೂ 2014ರಲ್ಲಿ ಮುಂಬೈ ತಂಡದ ಪರವಾಗಿ ಆಡಿದ್ದರು. ಆದರೆ ತವರು ನಗರವಾದ ಮುಂಬೈ ತಂಡವನ್ನು ಮುನ್ನಡೆಸಲು ಜಹೀರ್‌ ಖಾನ್‌ಗೆ ಅವಕಾಶ ಸಿಗಲಿಲ್ಲ.

ಅಜಿಂಕ್ಯಾ ರಹಾನೆ

ಅಜಿಂಕ್ಯಾ ರಹಾನೆ

ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಮುಂಬೈ ಮೂಲದ ಆಟಗಾರ. ಆರಂಭದಲ್ಲಿ ಮುಂಬೈ ತಂಡದಲ್ಲಿ ರಹಾನೆ ಸ್ಥಾನವನ್ನು ಪಡೆದುಕೊಂಡರಾದರೂ ಅಲ್ಲಿ ಹೆಚ್ಚಿನ ಅವಕಾಶಗಳು ರಹಾನೆಗೆ ಸಿಗಲಿಲ್ಲ. ಬಳಿಕ ರಹಾನೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದರು. ಅಲ್ಲಿ ರಹಾನೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತನ್ನ ತವರೂರಿನ ತಂಡವಾದ ಮುಂಬೈ ತಂಡವನ್ನು ಮುನ್ನಡೆಸುವ ಕನಸು ನನಸಾಗಿಲ್ಲ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಟೀಮ್ ಇಂಡಿಯಾದ ಸೀಮಿತ ಓವರ್‌ನಲ್ಲಿ ಮಿಂಚುಹರಿಸುತ್ತಿರುವ ಆಟಗಾರ ಅಂದರೆ ಅದು ಕರ್ನಾಟಕದ ಕೆಎಲ್ ರಾಹುಲ್. ಆದರೆ ಕೆಎಲ್ ರಾಹುಲ್ ಕೂಡ ತವರು ತಂಡವನ್ನು ಮುನ್ನಡೆಸುವ ಅವಕಾಶ ಸಿಗದ ಆಟಗಾರ. 2013ರಲ್ಲಿ ಐಪಿಎಲ್ ಕೆರಿಯರ್ ಆರಂಭಿಸಿದ ಕೆಎಲ್ ರಾಹುಲ್ ತವರು ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಕಾಶವನ್ನು ಪಡೆದುಕೊಂಡರು. ಆದರೆ ಆ ವರ್ಷದಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪೂರ್ಣಕಾಲಿಕ ನಾಯಕನಾದರು. ಆರ್‌ಸಿಬಿ ತಂಡಕ್ಕೆ ಆ ಬಳಿಕ ಮರಳಿದರಾದರು 2018ರಲ್ಲಿ ಆರ್‌ಸಿಬಿ ಕೆಎಲ್ ರಾಹುಲ್ ಅವರನ್ನು ರಿಟೈನ್ ಮಾಡಿಕೊಳ್ಳುವ ಮನಸ್ಸು ಮಾಡಲಿಲ್ಲ. 11 ಕೋಟಿ ಮೊತ್ತಕ್ಕೆ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ಪಾಲಾದರು ರಾಹುಲ್. ಈಗ ಕೆಎಲ್ ರಾಹುಲ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

Story first published: Friday, July 17, 2020, 10:11 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X