ನವದೆಹಲಿ: ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಜನರ ಸಾವು ನೋವಿಗಳಿಗೆ ಕಾರಣವಾಗುತ್ತಿದೆ. ಪಿಡುಗಿನಿಂದಾಗಿ ಸಂಕಷ್ಟಕ್ಕೀಡಾಗಿರುವ ರಣಜಿ ಕ್ರಿಕೆಟ್ ಮಾಜಿ ಆಟಗಾರರ ನೆರವಿಗೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (ಯುಪಿಸಿಎ) ನಿರ್ಧಾರ ಮಾಡಿದೆ.
WTC ಅಂಕ ಹಂಚಿಕೆ ಬಗ್ಗೆ ಪ್ರಶ್ನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ಟ್ವೀಟ್ ಮಾಡಿರುವ ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್, 'ಕೋವಿಡ್-19 ಪಿಡುಗಿನ ಸಮಯದಲ್ಲಿ ರಣಜಿ ಟ್ರೋಫಿ ಮಾಜಿ ಆಟಗಾರರಿಗೆ ಯುಪಿಸಿಎ ಆರ್ಥಿಕ ಸಹಾಯ ಘೋಷಿಸಿದೆ ಎಂದು ಪ್ರಮುಖ ಮಾಹಿತಿ ತಿಳಿಸುತ್ತಿದ್ದೇವೆ' ಎಂದು ಬರೆದುಕೊಂಡಿದೆ.
ಮಾಜಿ ರಣಜಿ ಆಟಗಾರರಿಗೆ ಒಂದು ಬಾರಿ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಿರುವ ಯುಪಿಸಿಎ ಈ ಪಿಡುಗಿನ ವೇಳೆ 50 ವರ್ಷ ಮೇಲ್ಪಟ್ಟ ಮಾಜಿ ಆಟಗಾರರಿಗೆ ಹಣ ಸಹಾಯ ಮಾಡಲಿದೆ. ಈ ಬಗ್ಗೆ ಯುಪಿಸಿಎ ವಿವರಣೆಯಾಗಿ ಬರೆದಿರುವ ಟ್ವಿಟರ್ ಪೋಸ್ಟ್ಗಳನ್ನು ಹಾಕಿಕೊಂಡಿದೆ.
ಟಿ20 ವಿಶ್ವಕಪ್ನಲ್ಲಿ ಬಲು ದೊಡ್ಡ ಬದಲಾವಣೆಗೆ ಐಸಿಸಿ ಗ್ರೀನ್ ಸಿಗ್ನಲ್: ವರದಿ
ಮಾಜಿ ಕ್ರಿಕೆಟಿಗರು ಆಡಿರುವ ಪಂದ್ಯಗಳಿಗನುಸಾರ ಆರ್ಥಿಕ ನೆರವು ನೀಡುವುದಾಗಿ ಯುಪಿಸಿಎ ಹೇಳಿದೆ. 1-5 ಪಂದ್ಯಗಳಿಗೆ 50,000 ರೂ., 6-15 ಪಂದ್ಯಗಳು 75,000 ರೂ., 16-24 ಪಂದ್ಯಗಳು 100000 ರೂ. ನೀಡುವುದಾಗಿ ಹೇಳಿದೆ. ಕ್ರಿಕೆಟ್ ಅಸೋಸಿಯೇಶನ್ ಈ ಹಿಂದೆಯೂ ಬಹಳ ಕ್ರಿಕೆಟರ್ಗಳಿಗೆ ನೆರವಿತ್ತಿದ್ದನ್ನು ನಾವಿಲ್ಲಿ ಸ್ಮರಿಸಬಹುದು.