ಭಾರತೀಯ ಕ್ರಿಕೆಟ್ ದಿಗ್ಗಜರ ಸಮಾಗಮ:
ಇಂದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ನ ಘಟಾನುಘಟಿ ಆಟಗಾರರೆಲ್ಲಾ ಭಾಗಿಯಾಗಿದ್ದರು. ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ಧೀನ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ಮಾಜಿ ಆಟಗಾರರು ಭಾಗಿಯಾಗಿದ್ದಾರೆ.
ಪಿಂಕ್ ಮಯವಾದ ಕೊಲ್ಕತ್ತಾ
ಪಿಂಕ್ ಬಾಲ್ನಲ್ಲಿ ಆಡುತ್ತಿರುವ ಕಾರಣ ಇಡೀ ವಾತಾವರಣವೆ ಪಿಂಕ್ ಮಯವಾಗಿದೆ. ಜೊತೆಗೆ ಕೊಲ್ಕತ್ತಾ ನಗರ ಪೂರ್ತಿ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದೆ. ಮೈದಾನದ ಸುತ್ತಲಿನ ಕಟ್ಟಡಗಳು ರಸ್ತೆಗಳು ಎಲ್ಲಾಕಡೆಗಳಲ್ಲೂ ಈ ವಿಶೇಷ ಪಂದ್ಯಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ಭಾರತ vs ಬಾಂಗ್ಲಾ, 2ನೇ ಟೆಸ್ಟ್, Live: ಇರುಳಿನ ಗುಮ್ಮನಿಗೆ ಬೆದರಿದ ಬಾಂಗ್ಲಾ
2003ರ ಪಂದ್ಯವನ್ನು ಸ್ಮರಿಸಿದ ವಿವಿಎಸ್ ಲಕ್ಷ್ಮಣ್:
ಊಟದ ವಿರಾಮದ ವೇಳೆ ಪಂದ್ಯ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ನ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್, ಲಕ್ಷ್ಮಣ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಆಸ್ಟ್ರೇಲಿಯಾ ವಿರುದ್ಧ 2003ರಲ್ಲಿ ಬಲಿಷ್ಠ ಆಸ್ಟ್ರೇಲಿಯಾದಿಂದ ಗೆಲುವನ್ನು ಕಸಿದುಕೊಂಡ ರೀತಿಯನ್ನು ಹಾಗೂ ಪಂದ್ಯದ ರೋಚಕ ಕ್ಷಣಗಳನ್ನು ನೆನಪಿಸಿಕೊಂಡರು.
ಗೌರವ ವಂದನೆ ಸ್ವೀಕರಿಸಿದ ದಿಗ್ಗಜ ಆಟಗಾರರು:
ಇಂದಿನ ಪಂದ್ಯದಲ್ಲಿ ಕ್ರಿಕೆಟ್ನ ದಿಗ್ಗಜರು ಭಾಗಿಯಾಗಿದ್ದರು. ಈ ವಿಶೇಷ ಸಂದರ್ಭದಲ್ಲಿ ಕಪಿಲ್ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಈಡನ್ ಗಾರ್ಡನ್ ಮೈದಾನಕ್ಕೆ ವಾಹನದ ಮೂಲಕ ಸುತ್ತುಹಾಕಿ ಅಭಿಮಾನಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.
ಪ್ರೇಕ್ಷಕರ ಜೊತೆ ಗಂಗೂಲಿ ಸೆಲ್ಫಿ:
ಟೆಸ್ಟ್ ಕ್ರಿಕೆಟ್ನಲ್ಲಿ ಅಭಿಮಾನಿಗಳನ್ನು ಸೆಳೆಯಲು ಡೇ ನೈಟ್ ಪಂದ್ಯ ಆಯೋಜನೆ ಮಾಡಲಾಗಿದೆ. ಈ ಪಂದ್ಯಕ್ಕೆ ಅಭಿಮಾನಿಗಳು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಈ ಸಂತಸವವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಈ ಸಂತಸವನ್ನು ಗಂಗೂಲಿ ತಮ್ಮ ಟ್ವಿಟರ್ನಲ್ಲೂ ಹಂಚಿಕೊಂಡರು.