ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 23) ನಡೆದ ವಿಜಯ್ ಹಜಾರೆ ಟ್ರೋಫಿ 2019 ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಗೆಲುವನ್ನಾಚರಿಸಿದೆ. ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಚತುರ ಬ್ಯಾಟಿಂಗ್ ನೆರವಿನೊಂದಿಗೆ ಛತ್ತೀಸ್ಗಢ ವಿರುದ್ಧ 9 ವಿಕೆಟ್ ಸುಲಭ ಜಯ ದಾಖಲಿಸಿರುವ ರಾಜ್ಯ ತಂಡ ಫೈನಲ್ಗೆ ಪ್ರವೇಶಿಸಿದೆ.
ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!
ಛತ್ತೀಸ್ಗಢ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಆರ್ ಕೌಶಿಕ್ 46ಕ್ಕೆ 4, ಅಭಿಮನ್ಯು ಮಿಥುನ್ 2, ಕೃಷ್ಣಪ್ಪ ಗೌತಮ್ 2, ಪ್ರವೀಣ್ ದೂಬೆ 2 ವಿಕೆಟ್ ಕೆಡವಿ ಎದುರಾಳಿಯನ್ನು ಕಾಡಿದರೆ, ರಾಹುಲ್, ಪಡಿಕ್ಕಲ್ ಅರ್ಧ ಶತಕ ಬಾರಿಸಿ ಬ್ಯಾಟಿಂಗ್ನಲ್ಲಿ ತಂಡ ಬೆಂಬಲಿಸಿದರು. ಫೈನಲ್ನಲ್ಲಿ ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಸ್ಪರ್ಧಿಸಲಿವೆ.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್ಮ್ಯಾನ್' ರೋಹಿತ್ ಶರ್ಮಾ!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಛತ್ತೀಸ್ಗಢದಿಂದ ಅಶುತೋಷ್ ಸಿಂಗ್ 20, ಹರ್ಪ್ರೀತ್ ಸಿಂಗ್ 25, ಅಮನ್ದೀಪ್ ಖಾರೆ 78, ಅಜಯ್ ಜಾಧವ್ ಮಂಡಲ್ 26, ಸುಮಿತ್ ರೂಯ್ಕರ್ 40 ರನ್ನೊಂದಿಗೆ 49.4ನೇ ಓವರ್ಗೆ ಎಲ್ಲಾ ವಿಕೆಟ್ ಕಳೆದು 223 ರನ್ ಮಾಡಿತು.
ಭಾರತ vs ದಕ್ಷಿಣ ಆಫ್ರಿಕಾ: ದ್ವಿಪಕ್ಷೀಯ ಟೆಸ್ಟ್ನಲ್ಲಿ ರೋಹಿತ್ ವಿಶೇಷ ದಾಖಲೆ
ಗುರಿ ಬೆಂಬತ್ತಿದ ಕರ್ನಾಟಕಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳ ಭರ್ಜರಿ ಬೆಂಬಲ ಲಭಿಸಿತು. ಕೆಎಲ್ ರಾಹುಲ್ 88, ದೇವದತ್ ಪಡಿಕ್ಕಲ್ 92, ಮಯಾಂಕ್ ಅಗರ್ವಾಲ್ 47 ರನ್ ಗಳಿಸಿದ್ದರಿಂದ ರಾಜ್ಯ ತಂಡ 40 ಓವರ್ಗೆ 1 ವಿಕೆಟ್ ನಷ್ಟದಲ್ಲಿ 229 ರನ್ ಪೇರಿಸಿ ಗೆಲುವಿನ ಕೇಕೆ ಹಾಕಿತು. ಅಕ್ಟೋಬರ್ 25ರಂದು 9 amಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಫೈನಲ್ ನಡೆಯಲಿದೆ.