ಸೋಲಿನೊಂದಿಗೆ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯನ್ನು ಆರಂಭಿಸಿದ್ದ ಕರ್ನಾತಕ ಎರಡನೇ ಪಂದ್ಯದಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿ ಗೆಲುವು ಸಾಧಿಸಿದೆ. ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕ ಬರೊಬ್ಬರಿ 267 ರನ್ಗಳ ಗೆಲುವು ಸಾಧಿಸಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಹಾಗೂ ಬೌಲಿಂಗ್ ವಿಭಾಗದ ಶ್ರೇಷ್ಠ ಪ್ರದರ್ಶನ ಎರಡನೇ ಪಂದ್ಯದಲ್ಲಿ ಕಂಡು ಬಂತು. ಹೀಗಾಗಿ ಬಿಹಾರ ತಂಡ ಕರ್ನಾಟಕದ ವಿರುದ್ಧ ಯಾವುದೇ ಹಂತದಲ್ಲೂ ತಿರುಗಿ ಬೀಳಲು ಸಾಧ್ಯವಾಗಲೇ ಇಲ್ಲ. ಕರ್ನಾಟಕ ತಂಡದ ಆರಂಭಿಕ ಜೋಡಿ 153 ರನ್ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು.
ಚುಟುಕು ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ
ಆರಂಭಿಕ ಆಟಗಾರ ಸಮರ್ಥ್ ಆರ್ ಅಜೇಯ 158 ರನ್ ಗಳಿಸಿ ಮಿಂಚಿದರು. ದೇವದತ್ ಪಡಿಕ್ಕಲ್ 97 ರನ್ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. ಬಳಿಕ ಬಂದ ಸಿದ್ಧಾರ್ಥ್ ಕೂಡ 76 ರನ್ಗಳ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ನಿಗದಿತ 50 ಓವರ್ಗಳಲ್ಲಿ ಕರ್ನಾಟಕ 3 ವಿಕೆಟ್ ಕಳೆದುಕೊಂಡು 354 ರನ್ಗಳಿಸಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಿಹಾರ ಆರಂಭಿಕ ಆಘಾತಕ್ಕೆ ಸಿಲುಕಿತು. 13 ರನ್ಗಳಿಸುವಷ್ಟರಲ್ಲಿ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು ಬಿಹಾರ. ನಂತರವೂ ಯಾವೊಂದು ಜೋಡಿಯೂ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು. ಹೀಗಾಗಿ 87 ರನ್ಗಳಿಗೆ ಬೊಹಾರ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಕರ್ನಾಟಕ ಬೃಹತ್ ಅಂತರದ ಗೆಲುವನ್ನು ಕಂಡಿದೆ.
ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ
ಕರ್ನಾಟಕದ ಪರವಾಗಿ ಬೌಲಿಂಗ್ನಲ್ಲಿ ಪ್ರಸಿಧ್ ಕೃಷ್ಣ 4 ವಿಕೆಟ್ ಪಡದು ಮಿಂಚಿದರೆ ಅಭಿಮನ್ಯು ಮಿಥುನ್ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಿತ್ತರು. ಜಗದೀಶ ಸುಚಿತ್ ಒಂದು ವಿಕೆಟ್ ಪಡೆದುಕೊಂಡರು.