ಬೆಂಗಳೂರು, ಸೆ.16: ದೇಶಿ ಏಕದಿನ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕವು ತನ್ನ ಅಭಿಯಾನವನ್ನು ಸೆಪ್ಟೆಂಬರ್ 24ರಿಂದ ಆರಂಭಿಸಲಿದೆ. ಹೈದರಾಬಾದ್ ವಿರುದ್ಧ ಕರ್ನಾಟಕ ತನ್ನ ಮೊದಲ ಪಂದ್ಯವಾಡಲಿದೆ.
ಒಟ್ಟು 38 ತಂಡಗಳು ಈ ಬಾರಿ ವಿಜಯ್ ಹಜಾರೆ ಟ್ರೋಫಿಗಾಗಿ ಕಾದಾಡುತ್ತಿವೆ. ಎಲೈಟ್ ಎ ಗುಂಪಿನಲ್ಲಿರುವ ಕರ್ನಾಟಕ ತಂಡದ ಎಲ್ಲ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಆಲೂರು ಮೈದಾನಗಳಲ್ಲಿ ಪಂದ್ಯ ನಡೆಯಲಿದ್ದು, ಎಲ್ಲ ಪಂದ್ಯಗಳು ಬೆಳಗ್ಗೆ 9ಕ್ಕೆ ಆರಂಭವಾಗಲಿವೆ.
ವಿಜಯ್ ಹಜಾರೆ: ಡೆಲ್ಲಿ ಸೋಲಿಸಿ 3ನೇ ಬಾರಿಗೆ ಟ್ರೋಫಿ ಎತ್ತಿದ ಮುಂಬೈ
ಕರ್ನಾಟಕದ ವೇಳಾಪಟ್ಟಿ
* ಸೆಪ್ಟೆಂಬರ್ 24: ಹೈದರಾಬಾದ್
* ಸೆಪ್ಟೆಂಬರ್ 26: ಜಾರ್ಖಂಡ್
* ಸೆಪ್ಟೆಂಬರ್ 28: ಛತ್ತೀಸ್ ಗಢ
* ಸೆಪ್ಟೆಂಬರ್ 29: ಮುಂಬೈ
* ಅಕ್ಟೋಬರ್ 03: ಸೌರಾಷ್ಟ್ರ
* ಅಕ್ಟೋಬರ್ 07: ಗೋವಾ
* ಅಕ್ಟೋಬರ್ 09: ಆಂಧ್ರ
* ಅಕ್ಟೋಬರ್ 13: ಕೇರಳ
ಎಲೈಟ್ ಎ, ಬಿ ಹಾಗೂ ಸಿ ಗುಂಪಿನ ಪಂದ್ಯಗಳು ಕ್ರಮವಾಗಿ ಬೆಂಗಳೂರು, ಜೈಪುರ ಹಾಗೂ ವಡೋದರದಲ್ಲಿ ನಡೆಯಲಿವೆ. ಪ್ಲೇಟ್ ಗುಂಪಿನ ಪಂದ್ಯಗಳು ಡೆಹ್ರಾಡೂನ್ನಲ್ಲಿ ನಡೆಯಲಿವೆ. ಎ, ಬಿ ಗುಂಪಿನಿಂದ ಅಗ್ರ 5 ತಂಡಗಳು ಮತ್ತು ಸಿ ಗುಂಪಿನಿಂದ ಅಗ್ರ 2 ಮತ್ತು ಪ್ಲೇಟ್ ಗುಂಪಿನಿಂದ 1 ಅಗ್ರ ತಂಡ ಕ್ವಾರ್ಟರ್ಫೈನಲ್ಗೇರಲಿದೆ.