ಬೆಂಗಳೂರು: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಗ್ರೌಂಡ್ನಲ್ಲಿ ಶನಿವಾರ (ಫೆಬ್ರವರಿ 20) ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 1, ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕೇರಳ ಪರವಾಗಿ ಆಡಿದ್ದ ಕರ್ನಾಟಕದ ಮಡಿಕೇರಿ ಮೂಲದ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಸ್ಫೋಟಕ ಶತಕ ಸಿಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!
ರಾಬಿನ್ ಉತ್ತಪ್ಪ ಬಿರುಸಿನ ಶತಕದ ನೆರವಿನಿಂದ ಒಡಿಶಾ ವಿರುದ್ಧದ ಈ ಪಂದ್ಯದಲ್ಲಿ ಕೇರಳ ತಂಡ 34 ರನ್ಗಳ ಗೆಲುವು (ವಿಜೆಡಿ ನಿಯಮದ ಆಧಾರದಲ್ಲಿ) ದಾಖಲಿಸಿದೆ. ಉತ್ತಪ್ಪ ಈ ಪಂದ್ಯದಲ್ಲಿ 85 ಎಸೆತಗಳಲ್ಲಿ 107 ರನ್ಗಳ ಕೊಡುಗೆ ನೀಡಿದ್ದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಒಡಿಶಾದಿಂದ ಗೌರವ್ ಚೌಧರಿ 57, ಸಂದೀಪ್ ಪಟ್ನಾಯಕ್ 66, ಅಭಿಷೇಕ್ ಯಾದವ್ 13, ರಾಜೇಶ್ ದೂಪ್ಕಾರ್ 20, ಕಾರ್ತಿಕ್ ಬಿಸ್ವಾಲ್ ಅಜೇಯ 45, ದೇಬಬ್ರತ ಪ್ರಧಾನ್ 27 ರನ್ ಸೇರಿಸಿದರು. ಒಡಿಶಾ 45 ಓವರ್ನಲ್ಲಿ 8 ವಿಕೆಟ್ ಕಳೆದು 258 ರನ್ ಗಳಿಸಿತು.
'ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲು ಕಾತರನಾಗಿದ್ದೇನೆ'
ಮಳೆ ಇದ್ದಿದ್ದರಿಂದ ಕೇರಳಕ್ಕೆ 38.2 ಓವರ್ಗಳಲ್ಲಿ 200 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಕೇರಳ, ರಾಬಿನ್ ಉತ್ತಪ್ಪ 107, ವಿಷ್ಣು ವಿನೋದ್ 28, ನಾಯಕ ಸಚಿನ್ ಬೇಬಿ 40, ವತ್ಸಲ್ ಗೋವಿಂದ್ 29, ಮೊಹಮ್ಮದ್ ಅಝರುದ್ದೀನ್ 23 ರನ್ನೊಂದಿಗೆ 38.2 ಓವರ್ನಲ್ಲಿ 233 ರನ್ ಗಳಿಸಿತು.