ಕೊಹ್ಲಿ-ರೋಹಿತ್ ವಿಶೇಷ ಸಂದೇಶಗಳು
ದೇಶಕ್ಕೆ ಬಂದಿರುವ ಕಠಿಣ ಸಂದರ್ಭ ಎಂದು ಹೇಳಿ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕರಿಬ್ಬರು ಟ್ವಿಟ್ಟರ್ನಲ್ಲಿ ವಿಶೇಷ ಸಂದೇಶವನ್ನು ಕೋರಿದ್ದಾರೆ. ಈ ಸಂದೇಶದಲ್ಲಿ ತಮ್ಮ ಅಭಿಮಾನಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.
ಸಂಕಷ್ಟದ ಸಮಯವಿದು
ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದ ಬಲವು ಅದರ ಅಭಿಮಾನಿಗಳಲ್ಲಿದ್ದರೆ ದೇಶದ ಶಕ್ತಿ ಅಲ್ಲಿನ ಜನರಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಭಾರತವು ಒಟ್ಟಾಗಿರುವುದನ್ನು ಜಗತ್ತಿಗೆ ತೋರಿಸಬೇಕಾದ ಸಮಯ ಇದು, ಮತ್ತು ಶೀಘ್ರದಲ್ಲೇ ಅದರಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಾವು ಒಗ್ಗಟ್ಟಾಗಿರೋದನ್ನು ಸಾರೋಣ
"ಕ್ರೀಡಾಂಗಣದ ಶಕ್ತಿ ಅದರಲ್ಲಿನ ಅಭಿಮಾನಿಗಳಲ್ಲಿದೆ. ದೇಶದ ಶಕ್ತಿ ಅದರ ಜನರಲ್ಲಿದೆ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ನಾವು ಒಟ್ಟಾಗಿದ್ದೇವೆಂದು ಜಗತ್ತಿಗೆ ತೋರಿಸಲು ಮತ್ತು ನಮ್ಮ ಆರೋಗ್ಯ ರಕ್ಷಕರ ಜೊತೆಗೆ ನಾವಿದ್ದೇವೆ ಎಂದು ತೋರಿಸಲು ಇಂದು ರಾತ್ರಿ 9 ನಿಮಿಷಗಳ ಕಾಲ ಬನ್ನಿ. ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದಿದ್ದಾರೆ.
ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ
ತಮ್ಮ ನಾಯಕನಂತೆ ರೋಹಿತ್ ಶರ್ಮಾ ಕೂಡ ದೇಶದ ಜನರಿಗೆ ಜಾಗೃತಿ ಮೂಡಿಸಲು ಮುಂದೆ ಬಂದಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ರಾಷ್ಟ್ರಕ್ಕೆ ಎಷ್ಟು ಮುಖ್ಯ ಎಂದು ಹೇಳಿದರು. ಈ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಲೇ ಬೇಕಿದೆ ಅದರ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.