ರಾಜ್ಯ ಕ್ರಿಕೆಟ್ಗೆ ಆಯ್ಕೆಯ ನಿರೀಕ್ಷೆ
ವಿರಾಟ್ ಕೊಹ್ಲಿ ಕ್ರಿಕೆಟ್ನ ಪ್ರಾಥಮಿಕ ಹಂತದಲ್ಲಿದ್ದ ಸಂದರ್ಭದ ಕಥೆಯಿದು. ರಾಜ್ಯ ಕ್ರಿಕೆಟ್ಗೆ ಆಯ್ಕೆಯಾಗಲು ಕೊಹ್ಲಿ ಹವಣಿಸುತ್ತಿದ್ದರು. ಅದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದರು. ಆದರೆ ಅಂತಿಮವಾಗಿ ವಿರಾಟ್ ಕೊಹ್ಲಿಗೆ ಉಂಟಾಗಿದ್ದು ಬಹುದೊಡ್ಡ ಆಘಾತ .
ರಾಜ್ಯ ಕ್ರಿಕೆಟ್ ಸಂಸ್ಥೆ ತಿರಸ್ಕರಿಸಿತ್ತು
ತನ್ನ ಅತ್ಯುತ್ತಮ ಆಟದ ಕಾರಣದಿಂದ ತಾನು ರಾಜ್ಯ ತಂಡಕ್ಕೆ ಆಯ್ಕೆಯಾಗುವ ದೊಡ್ಡ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಆಯ್ಕೆ ಸಮಿತಿ ತಿರಸ್ಕರಿಸಿದ್ದ ವಿಚಾರ ಮತ್ತು ಅದಕ್ಕೆ ನೊಂದು ರಾತ್ರಿಯಿಡೀ ಕಣ್ಣೀರಿಟ್ಟಿದ್ದ ಸಂಗತಿಯನ್ನು ಕೊಹ್ಲಿ ಹೇಳಿದ್ದಾರೆ.
ಎಲ್ಲವೂ ನನ್ನ ಪರವಾಗಿಯೇ ಇತ್ತು ಆದರೆ..
ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಯಾಗುವ ನಿರೀಕ್ಷೆಯಲ್ಲಿ ತಾನಿದ್ದೆ, ಯಾಕೆಂದರೆ ನಾನು ಉತ್ತಮವಾಗಿ ರನ್ ಗಳಿಸಿದ್ದೆ. ಎಲ್ಲವೂ ನನ್ನ ಪರವಾಗಿಯೇ ಇತ್ತು, ತಂಡಕ್ಕೆ ಆಯ್ಕೆಯಾಗಲು ಬೇಕಾದ ಅರ್ಹತೆಯನ್ನು ನಾನು ಗಳಿಸಿಕೊಂಡಿದ್ದೆ. ಹಾಗಿದ್ದರೂ ನಾನು ತಿರಸ್ಕೃತನಾಗಿದ್ದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಾರಣವೇನೆಂದು ತಿಳಿದುಕೊಳ್ಳುವ ಪ್ರಯತ್ನ
ಇದನ್ನು ನಂಬಲು ಸಾಧ್ಯವಾಗದೆ ನಾನು ರಾತ್ರಿಯಿಡೀ ಕಣ್ಣೀರಿಟ್ಟೆ. ಎರಡು ಗಂಟೆಗಳ ಕಾಲ ಕೋಚ್ಗೆ ಕರೆ ಮಾಡಿ ಮಾತನಾಡಿದೆ. ಯಾಕೆ ನಾನು ಆಯ್ಕೆಯಾಗಿಲ್ಲ ಎಂದು ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಪಟ್ಟೆ. ಯಾವಾಗ ನಮ್ಮಲ್ಲಿ ಉತ್ಸಾಹ ಮತ್ತು ಬದ್ಧತೆಯಿರುತ್ತದೋ ಅದು ನಮ್ಮ ಬೆಂಬಲಕ್ಕೆ ಇರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2006ರಲ್ಲಿ ಡೆಲ್ಲಿ ತಂಡಕ್ಕೆ ಆಯ್ಕೆ
ವಿರಾಟ್ ಕೊಹ್ಲಿ ಡೆಲ್ಲಿ ರಾಜ್ಯ ಕ್ರಿಕೆಟ್ಗೆ 2006ರಲ್ಲಿ ಪದಾರ್ಪಣೆಯನ್ನು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಅದಾದ ಬಳಿಕ ಟೀಮ್ ಇಂಡಿಯಾದ ಕದ ತಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಎರಡು ವರ್ಷಗಳ ಬಳಿಕ ಅಂದರೆ 2008ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಆಯ್ಕೆಯಾಗುತ್ತಾರೆ.