ಆ ಒಂದು ಕಾರಣದಿಂದಾಗಿ ಯುಜ್ವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಲಾಗಿಲ್ಲ
'ಯುಜ್ವೇಂದ್ರ ಚಹಲ್ ಅವರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ನೀಡುವುದು ತೀರಾ ಕಷ್ಟದ ಕೆಲಸವಾಗಿತ್ತು. ಆದರೆ ನಾವು ಚಹಲ್ ಬದಲಾಗಿ ರಾಹುಲ್ ಚಹರ್ ಅವರನ್ನು ಆಯ್ಕೆಮಾಡಿದ್ದರ ಹಿಂದೆ ಒಂದು ದೃಢವಾದ ಕಾರಣವೂ ಸಹ ಇದೆ. ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ರಾಹುಲ್ ಚಹರ್ ಉತ್ತಮ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮತ್ತು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಾಹುಲ್ ಚಹರ್ ಅಮೋಘ ಪ್ರದರ್ಶನವನ್ನು ನೀಡಿದರು. ರಾಹುಲ್ ಚಹರ್ ಕಷ್ಟದ ಓವರ್ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಬೌಲರ್. ಹೀಗಾಗಿ ಆತನನ್ನು ಆಯ್ಕೆ ಮಾಡಲಾಯಿತು' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ರಾಹುಲ್ ಚಹರ್ ಸ್ಪಿನ್ ವೇಗವೇ ಆಯ್ಕೆಗೆ ಕಾರಣ
ಇನ್ನೂ ಮುಂದುವರಿದು ಮಾತನಾಡಿರುವ ವಿರಾಟ್ ಕೊಹ್ಲಿ ರಾಹುಲ್ ಚಹರ್ ಅವರ ಸ್ಪಿನ್ ವೇಗವೇ ಅವರ ಆಯ್ಕೆಗೆ ಕಾರಣ ಎಂದಿದ್ದಾರೆ. 'ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ಗಳು ನಿಧಾನಗತಿಯಲ್ಲಿ ಬೀಳಿಲಿವೆ. ಹೀಗಾಗಿ ವೇಗದ ಎಸೆತಗಳನ್ನು ಹಾಕುವ ಸ್ಪಿನ್ ಬೌಲರ್ನ ಅಗತ್ಯತೆ ತಂಡಕ್ಕಿದೆ. ವೇಗದ ಸ್ಪಿನ್ ಬೌಲಿಂಗ್ ಮಾಡಿದರೆ ಮಾತ್ರ ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಆಕ್ರಮಣ ಮಾಡಲು ಸಾಧ್ಯ. ಈ ಎಲ್ಲಾ ಸಾಮರ್ಥ್ಯಗಳು ರಾಹುಲ್ ಚಹರ್ ಬೌಲಿಂಗ್ನಲ್ಲಿ ಖಂಡಿತವಾಗಿಯೂ ಇವೆ' ಎಂದು ವಿರಾಟ್ ಕೊಹ್ಲಿ ರಾಹುಲ್ ಚಹರ್ ಆಯ್ಕೆ ಹಿಂದಿನ ನಿಖರವಾದ ಕಾರಣ ಬಿಚ್ಚಿಟ್ಟಿದ್ದಾರೆ.
ವಿಶ್ವಕಪ್ ತಂಡದಲ್ಲಿ ಎಲ್ಲರಿಗೂ ಸ್ಥಾನ ನೀಡಲಾಗುವುದಿಲ್ಲ
'ರಾಹುಲ್ ಚಹರ್ ಬಳಿ ಈ ರೀತಿಯ ಸಾಮರ್ಥ್ಯ ಇರುವುದರಿಂದಲೇ ಅವರನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾದ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವಕಪ್ ಟೂರ್ನಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವುದು ತೀರಾ ಕಷ್ಟದ ಕೆಲಸ. ಎಲ್ಲಾ ರೀತಿಯಲ್ಲಿಯೂ ಸ್ಪಷ್ಟವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೀಗಿದ್ದಾಗ ಪ್ರತಿಯೊಬ್ಬರಿಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗುವುದಿಲ್ಲ' ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.