|
ಯಾವಾಗ ಕುಲ್ದೀಪ್ ಆಡುತ್ತಾರೆ?
ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರ ಟ್ವಿಟ್ಟರ್ನಲ್ಲಿ "ಜಡೇಜಾ, ಅಶ್ವಿನ್ ಇದ್ದಾಗ ಸಾಡಲು ಅವಕಾಶ ದೊರೆಯುವುದಿಲ್ಲ. ಜಡೇಜಾ ತಂಡದಲ್ಲಿ ಇಲ್ಲದಾಗಲೂ ಅವಕಾಶವಿಲ್ಲ. ಅದು ಕೂಡ ತವರಿನಲ್ಲಿ ಆಡುವಾಗ. ಯಾವಾಗ ಈತ ಆಡುತ್ತಾನೆ?" ಎಂದು ಪ್ರಶ್ನಿಸಿದ್ದಾರೆ.
|
ಬಲಿಷ್ಠವಾಗಿರಿ ಕುಲ್ದೀಪ್
ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿ "ಎರಡು ವರ್ಷಗಳ ಹಿಂದೆ ಕುಲ್ದೀಪ್ ಯಾದವ್ ತವರು ನೆಲದಲ್ಲಿ ಸ್ಪಿನ್ನರ್ ಆಗಿ ಮೊದಲ ಆಯ್ಕೆ ಎಂದು ಬಣ್ಣಿಸಲಾಗಿತ್ತು. ಆದರೆ ಈಗ ಅವರು ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಅವರು ಸ್ಪೂರ್ತಿಗಾಗಿ ಬೇರೆಲ್ಲೂ ನೋಡಬೇಕಿಲ್ಲ. ಅಶ್ವಿನ್ ಹಾಗೂ ಪಂತ್ ಕೂಡ ಇಂತಾ ಪರಿಸ್ಥಿತಿಯನ್ನು ಎದುರಿಸಿಕೊಂಡೇ ಬಂದಿದ್ದಾರೆ. ಬಲಿಷ್ಠವಾಗಿರಿ ಕುಲ್ದೀಪ್" ಎಂದಿದ್ದಾರೆ.
|
ಕುಲ್ದೀಪ್ ಬಗ್ಗೆ ನಂಬಿಕೆಯಿಲ್ಲ!
ಕನ್ನಡಿಗ ದೊಡ್ಡ ಗಣೇಶ್ ಕೂಡ ಈ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. "ಗಾಬಾದಲ್ಲಿ ನೆಟ್ ಬೌಲರ್ಗಳನ್ನು ತಂಡಕ್ಕೆ ಸೇರಿಸಿ ಕುಲ್ದೀಪ್ ಬದಲಿಗೆ ಆಡಿಸಲಾಯಿತು. ಚೆಪಾಕ್ನಲ್ಲಿ ಮೀಸಲು ಆಟಗಾರರನ್ನು ಕುಲ್ದೀಪ್ ಬದಲಿಗೆ ಕಣಕ್ಕಿಳಿಸಲಾಗಿದೆ. ಇದನ್ನು ನೋಡಿದಾಗ ತಂಡದ ಮ್ಯಾನೇಜ್ಮೆಂಟ್ಗೆ ಕುಲ್ದೀಪ್ ಮೇಲೆ ಭರವಸೆ ಇಲ್ಲದಂತೆ ಕಾಣಿಸುತ್ತಿದೆ. ಹೀಗಿದ್ದಾಹ ಅವರನ್ನು ತಂಡದಿಂದ ಕೈಬಿಟ್ಟರೆ ಅವರಿಗೆ ದೇಶೀಯ ಕ್ರಿಕೆಟ್ನಲ್ಲಿಯಾದರೂ ಆಡುವ ಅವಕಾಶ ದೊರೆಯುತ್ತದೆ" ಎಂದಿದ್ದಾರೆ.