ಆಟಗಾರರ ಬದಲಾವಣೆಗೆ ವಿಷಾದ
ಮೊಹಮ್ಮದ್ ಕೈಫ್ ಕೂಡ ತಂಡದಲ್ಲಿ ಆಗಾಗ ಆಟಗಾರರನ್ನು ಬದಲಾಯಿಸುತ್ತಿರುವ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡಿದ್ದಾರೆ. ಕೊಹ್ಲಿ ಟೀಮ್ ಇಂಡಿಯಾದಲ್ಲಿ ಆಟಗಾರರನ್ನು ಬದಲಾಯಿಸುತ್ತಿರುತ್ತಾರೆ, ರಿಷಭ್ ಪಂತ್ ಅವರನ್ನು ನಿಯಮಿತವಾಗಿ ಆಡಿಸುವ ಬದಲು ಅವರನ್ನು ವಾಟರ್ ಬಾಟಲ್ ಸಾಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ಲೇಯರ್ಸ್ ಅನ್ನು ಕಡೆಗಣಿಸಬಾರದು
'ಕೊಹ್ಲಿ ಗಮನ ಹರಿಸಬೇಕು, ತನ್ನ ತಂಡದ ಅಯ್ಕೆಗೆ ಬೆಂಬಲ ನೀಡಬೇಕು. ಕೆಲವು ಆಟಗಾರರು ಒಂದೆರಡು ಪಂದ್ಯಗಳಲ್ಲಿ ಫಾರ್ಮ್ ತೋರಿಸದಿದ್ದ ಮಾತ್ರಕೆ ಅವರನ್ನು ಕಡೆಗಣಿಸಬೇಕೆಂದಲ್ಲ. ಬದಲಿಗೆ ಅವರಿಗೆ ಇನ್ನೂ ಕೊಂಚ ಬೆಂಬಲ ನೀಡಬೇಕು. ಆಗ ಆ ಆಟಗಾರನಿಗೆ ಆತ್ಮಸ್ಥೈರ್ಯ ಬರುತ್ತದೆ. ಹೀಗಾದರೆ ಮಾತ್ರ ಒಂದು ಒಳ್ಳೆಯ ತಂಡ ಕಟ್ಟಲು ಸಾಧ್ಯ,' ಎಂದು ಕೈಫ್ ಹೇಳಿದ್ದಾರೆ.
ರಾಹುಲ್ ಬ್ಯಾಕ್ಅಪ್ ಕೀಪರ್ ಆಗಬಲ್ಲರು
'ವಿಕೆಟ್ ಕೀಪರ್ಗಳ ವಿಚಾರದಲ್ಲೂ ಹೀಗೆಯೇ. ಆಟಗಾರರನ್ನು ಪದೇ ಪದೇ ಬದಲಾಯಿಸುತ್ತಿರಲಾಗುತ್ತಿದೆ. ಭಾರತಕ್ಕೆ ಶಾಶ್ವತ ಪರಿಣಿತ ವಿಕೆಟ್ ಕೀಪರ್ ಒಬ್ಬ ಬೇಕಿದೆ. ಕೆಎಲ್ ರಾಹುಲ್ ಬ್ಯಾಕ್ಅಪ್ ಕೀಪರ್ ಆಗಬಲ್ಲರು. ಆದರೆ ಅವರು ಈಗಲೇ ಮೇನ್ ಕೀಪರ್ ಆಗುತ್ತಾರೆಂದು ನನಗನ್ನಿಸುತ್ತಿಲ್ಲ,' ಎಂದು ಕೈಫ್ ನುಡಿದರು.
ಈ ಅಡೆತಡೆಗಳನ್ನು ದಾಟಿಬರಬೇಕಿದೆ
'ಧೋನಿ ಬದಲಿಗೆ ನೀವು ರಿಷಭ್ ಪಂತ್ಗೆ ಬೆಂಬಲಿಸಬೇಕಾಗಿ ಬಂದರೆ, ಕೊಹ್ಲಿ ಪಂತ್ನನ್ನು ಬೆಂಬಲಿಸಬೇಕು. ಪಂತ್ ತಂಡದಲ್ಲಿ ವಾಟರ್ ಬಾಯ್ ಆಗಿರಬಾರದು. ಕೊಹ್ಲಿ ಮತ್ತು ತಂಡ ಇದನ್ನೆಲ್ಲಾ ಸರಿಪಡಿಸಿಕೊಳ್ಳಬೇಕು. ಅಡೆತಡೆಗಳನ್ನು ದಾಟಿಬರಬೇಕು,' ಎಂದು ಕೈಫ್ ವಿವರಿಸಿದರು.