ಎಲ್ಲರೂ ಕಾಲೆಳೆದಾಗ ಬೆನ್ನಿಗೆ ನಿಂತಿದ್ದು ವಿರಾಟ್ ಕೊಹ್ಲಿ
ನೀವು ಗಮನಿಸಿರಬಹುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊಹಮ್ಮದ್ ಸಿರಾಜ್ ಸೇರಿಕೊಂಡು ಸಾಲು ಸಾಲು ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದ ವಿರಾಟ್ ಕೊಹ್ಲಿ ಪದೇಪದೆ ಅವಕಾಶಗಳನ್ನು ಕೊಡುವುದರ ಮೂಲಕ ಮೊಹಮ್ಮದ್ ಸಿರಾಜ್ ಬೆನ್ನಿಗೆ ನಿಂತಿದ್ದರು.
ತಂದೆಯನ್ನು ಕಳೆದುಕೊಂಡಾಗ ಧೈರ್ಯ ತುಂಬಿದ್ದರು ವಿರಾಟ್
ಆಸ್ಟ್ರೇಲಿಯ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಂದೆ ನಿಧನರಾದ ಸುದ್ದಿಯನ್ನು ತಿಳಿದ ಮೊಹಮ್ಮದ್ ಸಿರಾಜ್ ಕುಸಿದಿದ್ದರಂತೆ, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡದ ಕೋಚ್ ರವಿಶಾಸ್ತ್ರಿ ಇಬ್ಬರು ಮೊಹಮ್ಮದ್ ಸಿರಾಜ್ಗೆ ಧೈರ್ಯ ತುಂಬಿ ಸಮಾಧಾನ ಮಾಡಿ ಮತ್ತೆ ಕ್ರಿಕೆಟ್ ಆಡುವಂತೆ ಪ್ರೇರೇಪಿಸಿದ್ದರಂತೆ.
ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದಿದ್ದರು ವಿರಾಟ್ ಕೊಹ್ಲಿ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನವನ್ನು ನೀಡಿದರು. ಹೀಗೆ ಚೆನ್ನೈ ವಿರುದ್ಧದ ಪಂದ್ಯ ಮುಗಿದ ಬಳಿಕ ಸಿರಾಜ್ ಬಳಿ ಬಂದ ವಿರಾಟ್ ಕೊಹ್ಲಿ ಆತನ ಬೌಲಿಂಗ್ ಪ್ರದರ್ಶನವನ್ನು ಕೊಂಡಾಡಿದ್ದರು ಹಾಗೂ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧನಾಗು ಎಂದು ಕೊಹ್ಲಿ ಶುಭ ಕೋರಿದ್ದರು ಎಂದು ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ.