ಶ್ರೀಹರಿಕೋಟಾ, ಜುಲೈ 22: ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ (ಜುಲೈ 22) ನಡೆದ ಚಂದ್ರಯಾನ್-2 ಯಶಸ್ವಿ ರಾಕೆಟ್ ಉಡಾವಣೆಗಾಗಿ ಭಾರತದ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ಚಂದ್ರಯಾನ್-2 ಯಶಸ್ವಿ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಅನಂತ ಧನ್ಯವಾದಗಳು', ಎಂದು ಬರೆದುಕೊಂಡಿದ್ದಾರೆ. ಸೋಮವಾರ (ಜುಲೈ 22) ರಾಕೆಟ್ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದರು.
I always looked up at the moon as a child, wondering what secrets it's hiding. The successful launch of #Chandrayaan2 will shed some light on these secrets, & motivate the next gen to help India's space exploration programme. I congratulate everyone at @ISRO for this success. pic.twitter.com/xy6aGt0xi3
— Gautam Gambhir (@GautamGambhir) July 22, 2019
ಮತ್ತೊಬ್ಬ ಮಾಜಿ ಕ್ರಿಕೆಟಿಗ, ಸದ್ಯದ ಬಿಜೆಪಿ ಸಂಸದ ಗೌತಮ್ ಗಂಭೀರ್ ಇನ್ನೂ ಸೊಗಸಾದ ಸಾಲುಗಳನ್ನು ಟ್ವೀಟ್ ನಲ್ಲಿ ಸೇರಿಸಿಕೊಂಡಿದ್ದಾರೆ. 'ಚಿಕ್ಕವನಿದ್ದಾಗ ಚಂದ್ರನತ್ತ ದಿಟ್ಟಿಸಿ ಆತ ಅದೇನು ರಹಸ್ಯ ಅವಿತಿಟ್ಟುಕೊಂಡಿರಬಹುದು ಎಂದು ಅಚ್ಚರಿಗೊಳ್ಳುತ್ತಿದ್ದೆ. ಚಂದ್ರಯಾನ್-2 ಇಂಥ ಕೆಲ ರಹಸ್ಯಗಳಿಗೆ ಬೆಳಕು ಚೆಲ್ಲಲಿದೆ ಅಂದುಕೊಳ್ಳುತ್ತೇನೆ. ಇಸ್ರೋದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.