ಗಾಯಕ್ಕೀಡಾಗಿರುವ ಭಾರತೀಯರು
* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ರಿಷಭ್ ಪಂತ್, ಮೊಣಕೈಗೆ ಗಾಯ, ತಂಡದಿಂದ ಹೊರ ಬೀಳುವ ಭೀತಿ
* ಹನುಮ ವಿಹಾರಿ, ಹ್ಯಾಮ್ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್ಪ್ರೀತ್ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ಗಾಯದ ಭೀತಿ
|
ವೀರೇಂದ್ರ ಸೆಹ್ವಾಗ್ ತರಲೆ
ದೊಡ್ಡ ಸಂಖ್ಯೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಗಾಯಕ್ಕೀಡಾಗಿರುವುದನ್ನು ತಮಾಷೆಯಾಗಿ ತೆಗೆದುಕೊಂಡಿರುವ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, 'ಇಷ್ಟೆಲ್ಲಾ ಆಟಗಾರರು ಗಾಯಗೊಂಡಿದ್ದಾರೆ. ಪ್ಲೇಯಿಂಗ್ XIಗೆ ಜನ ಸಾಕಾಗದಿದ್ದರೆ ಆಸ್ಟ್ರೇಲಿಯಾಕ್ಕೆ ಹೋಗಲು ನಾನು ತಯಾರಿದ್ದೇನೆ. ಆದರೆ ಕ್ವಾರಂಟೈನ್ ಅನ್ನು ಮಾತ್ರ ಬಿಸಿಸಿಐ ನೋಡಿಕೊಳ್ಳಬೇಕು,' ಎಂದು ಟ್ವೀಟ್ ಮಾಡಿದ್ದಾರೆ.
ಆಕ್ರಮಣಕಾರಿ ಆಟಗಾರ
ಸದ್ಯ ಬಿಜೆಪಿ ಸೇರಿಕೊಂಡಿರುವ ವೀರೇಂದ್ರ ಸೆಹ್ವಾಗ್, ಆಡುತ್ತಿದ್ದಾಗ ಭಾರತದ ಪ್ರಮುಖ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದರು. ಆಕ್ರಮಣಕಾರಿ ಆಟಕ್ಕೆ ಹೆಚ್ಚು ಜನಪ್ರಿಯರಾಗಿದ್ದರು. ವೀರೂ ಅವರು 104 ಟೆಸ್ಟ್ ಪಂದ್ಯಗಳಲ್ಲಿ 49.34ರ ಸರಾಸರಿಯಂತೆ 8586 ರನ್ ಬಾರಿಸಿದ್ದಾರೆ. ಇದರಲ್ಲಿ 23 ಶತಕ, 6 ದ್ವಿಶತಕಗಳು ಸೇರಿವೆ. ಅಂದ್ಹಾಗೆ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ನಿರ್ಣಾಯಕ 4ನೇ ಪಂದ್ಯ ಜನವರಿ 15ರಿಂದ ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.