'130ರಿಂದ 150 ರನ್ ಬಾರಿಸುತ್ತಾರೆ ಎಂದುಕೊಂಡಿದ್ದೆ'
ಲಂಕಾ ವಿರುದ್ಧದ 3 ಪಂದ್ಯಗಳ ಟ್ವೆಂಟಿ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 130ರಿಂದ 150 ರನ್ ಕಲೆ ಹಾಕಲಿದೆ ಎಂದು ವಿರೇಂದ್ರ ಸೆಹವಾಗ್ ಊಹಿಸಿದ್ದರಂತೆ. ಆದರೆ ಕೇವಲ 81 ರನ್ ಗಳಿಸಿದ ಟೀಂ ಇಂಡಿಯಾ ತನ್ನ ಊಹೆಯನ್ನು ಹುಸಿಗೊಳಿಸಿತು ಎಂದು ವಿರೇಂದ್ರ ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಳಪೆ ಬ್ಯಾಟಿಂಗ್ ಪ್ರದರ್ಶನ
ಲಂಕಾ ವಿರುದ್ಧದ ಕೊನೆಯ ಟಿ ಟ್ವೆಂಟಿ ಪಂದ್ಯದಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದ ಭಾರತ ತಂಡದ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಮೊದಲ 5 ಬ್ಯಾಟ್ಸ್ಮನ್ಗಳ ಪೈಕಿ ಕೇವಲ ರುತುರಾಜ್ ಗಾಯಕ್ವಾಡ್ ಮಾತ್ರ ಎರಡಂಕೆ ಮುಟ್ಟಿದ್ದರು. ಉಳಿದ ಎಲ್ಲಾ ಬ್ಯಾಟ್ಸ್ಮನ್ಗಳೂ ಸಹ ಎರಡಂಕಿ ದಾಟುವ ಸಾಹಸ ಮಾಡದೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದರು. ತಂಡದ ಪರ ಜವಾಬ್ದಾರಿಯುತ ಆಟವನ್ನಾಡದ ಭಾರತದ ಬ್ಯಾಟ್ಸ್ಮನ್ಗಳೇ ಸೋಲಿಗೆ ಕಾರಣ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಭಾರತಕ್ಕೆ ಮಾರಕವಾದ ವನಿಂದು ಹಸರಂಗ
ಶ್ರೀಲಂಕಾ ಪರ ಬೌಲರ್ ವನಿಂದು ಹಸರಂಗ ಭಾರತದ ವಿರುದ್ಧ ಶ್ರೀಲಂಕಾ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟ್ಸ್ಮನ್ಗಳಾದ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ವಿಕೆಟ್ಗಳನ್ನು ಪಡೆದ ವನಿಂದು ಹಸರಂಗ ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ವಿಕೆಟ್ಗಳನ್ನೂ ಪಡೆದರು. ಹೀಗೆ ಭಾರತದ ಪ್ರಮುಖ ವಿಕೆಟ್ಗಳನ್ನು ಪಡೆದ ಶ್ರೀಲಂಕಾ ಬೌಲರ್ ವನಿಂದು ಹಸರಂಗ 4 ಓವರ್ಗಳನ್ನು ಮಾಡಿ ಕೇವಲ 9 ರನ್ ನೀಡಿ 4 ವಿಕೆಟ್ಗಳನ್ನು ಪಡೆದು ಮಿಂಚಿದರು.