ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೆಹಲಿ ಕ್ರಿಕೆಟ್ ಸಮಿತಿಗೆ ರಾಜೀನಾಮೆ ನೀಡಿದ ಸೆಹ್ವಾಗ್

Virender Sehwag resigns from DDCA cricket committee

ನವದೆಹಲಿ, ಸೆಪ್ಟೆಂಬರ್ 17: ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ದೆಹಲಿ ಹಾಗೂ ಡಿಸಿಕ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಕ್ರಿಕೆಟ್ ಸಮಿತಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಸೋಮವಾರ (ಸೆಪ್ಟೆಂಬರ್ 17)ದಂದು ಘೋಷಿಸಿದ್ದಾರೆ.

ಸೆಹ್ವಾಗ್, ಆಕಾಶ್ ಛೋಪ್ರಾ, ರಾಹುಲ್ ಸಾಂಘ್ವಿ ಅವರಿದ್ದ ಸಮಿತಿ ಇತ್ತೀಚೆಗೆ ಮನೋಜ್ ಪ್ರಭಾಕರ್ ಅವರನ್ನು ಬೌಲಿಂಗ್ ಕೋಚ್ ಆಗಿ ಉಳಿಸಿಕೊಳ್ಳುವ ಬಗ್ಗೆ ಶಿಫಾರಸು ಮಾಡಿತ್ತು. ಆದರೆ, ಇದಕ್ಕೆ ಪುರಸ್ಕಾರ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮನನೊಂದು ಸೆಹ್ವಾಗ್ ಅವರು ರಾಜೀನಾಮೆ ಸಲ್ಲಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಗಂಭೀರ್ ಸ್ಪರ್ಧೆ? ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಗಂಭೀರ್ ಸ್ಪರ್ಧೆ?

ಸೆಹ್ವಾಗ್ ಬೆನ್ನಲ್ಲೇ ಆಕಾಶ್ ಹಾಗೂ ರಾಹುಲ್ ಕೂಡಾ ರಾಜೀನಾಮೆ ನೀಡಿದ್ದಾರೆ. ಮೂವರ ರಾಜೀನಾಮೆ ಕೂಡಾ ಅಂಗೀಕೃತವಾಗಿವೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಶೀಘ್ರವೇ ಹೊಸ ಸಮಿತಿಯನ್ನು ನೇಮಿಸಬೇಕಾಗುತ್ತದೆ.

ಗಂಭೀರ್ ಕಾರಣವೇ?: ಪ್ರಭಾಕರ್ ಅವರ ನೇಮಕ ಕುರಿತಂತೆ ಮಾಜಿ ನಾಯಕ ಗೌತಮ್ ಗಂಭೀರ್ ಅವರು ಅಪಸ್ವರ ಹಾಡಿದ್ದರು. 2000ದ ಮ್ಯಾಚ್ ಫಿಕ್ಸಿಂಗ್ ಕೇಸಿನಲ್ಲಿ ಮನೋಜ್ ಪ್ರಭಾಕರ್ ಹೆಸರು ಕೇಳಿ ಬಂದಿತ್ತು . ಇದಕ್ಕೆ ಕಾರಣ ಎನ್ನಲಾಗಿದೆ. 2007-08ರಲ್ಲಿ ರಣಜಿ ತಂಡಕ್ಕೆ ಮನೋಜ್ ಕೋಚ್ ಆಗಿದ್ದಾಗ ಗಂಭೀರ್ ಅವರು ಯಾವುದೇ ಪ್ರತಿರೋಧ ಒಡ್ಡಿರಲಿಲ್ಲ.

ಕ್ರಿಕೆಟ್ : ಡಿಡಿಸಿಎಗೆ ಪತ್ರಕರ್ತ ರಜತ್ ಶರ್ಮ ಹೊಸ ಬಾಸ್ ಕ್ರಿಕೆಟ್ : ಡಿಡಿಸಿಎಗೆ ಪತ್ರಕರ್ತ ರಜತ್ ಶರ್ಮ ಹೊಸ ಬಾಸ್

ಆದರೆ, ಸೆಹ್ವಾಗ್ ಹಾಗೂ ಗಂಭೀರ್ ನಡುವೆ ಪ್ರಭಾಕರ್ ನೇಮಕ ಕುರಿತಂತೆ ಯಾವುದೆ ಮನಸ್ತಾಪವಾಗಿಲ್ಲ ಎಂಬ ಸುದ್ದಿಯೂ ಇದೆ. ಜೊತೆಗೆ ಸೆಹ್ವಾಗ್ ಹಾಗೂ ಸಾಂಘ್ವಿ ಇಬ್ಬರ ಮೇಲೆ ಲಾಭದಾಯಕ ಹುದ್ದೆ ಹೊಂದಿರುವ ಆರೋಪವೂ ಕೇಳಿ ಬಂದಿದೆ.

Story first published: Monday, September 17, 2018, 13:49 [IST]
Other articles published on Sep 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X