ಆರಂಭಿಕನಾಗಿ ಪಡಿಕ್ಕಲ್ಗಿಲ್ಲ ಸ್ಥಾನ
ವಿವಿಎಸ್ ಲಕ್ಷ್ಮಣ್ ಹೆಸರಿಸಿದ ಈ ಆಡುವ ಬಳಗದಲ್ಲಿ ಯಾವುದೇ ಹೊಸ ಆಟಗಾರರಿಗೆ ಮಣೆ ಹಾಕಿಲ್ಲ ಎಂಬುದು ಗಮನಾರ್ಹ. ಈಗಾಗಲೇ ಭಾರತ ತಂಡದವನ್ನು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿರುವ ಆಟಗಾರರೇ ಇದ್ದಾರೆ. ಹೀಗಾಗಿ ಆರಂಭಿಕನಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಬದಲಿಗೆ ದೇಶೀಯ ಕ್ರಿಕೆಟ್ನಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ ಪೃಥ್ವಿ ಶಾಗೆ ಅವಕಾಶವನ್ನು ನೀಡಲಾಗಿದ್ದು ಶಿಖರ್ ಧವನ್ಗೆ ಸಾಥ್ ನೀಡಲಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಯಾರು?
ಮೂರನೇ ಕ್ರಮಾಂಕದಲ್ಲಿ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಮೇಲೆ ಭರವಸೆಯಿಟ್ಟು ಹೆಸರಿಸಿದ್ದಾರೆ ಲಕ್ಷ್ಮಣ್. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿದ್ದು ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಹೆಸರಿಸಲಾಗಿದೆ ಹಾಗೂ ಅನುಭವಿ ಮನೀಶ್ ಪಾಂಡೆ ಐದನೇ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿದ್ದಾರೆ.
ಕೆಳ ಕ್ರಮಾಂಕ ಮತ್ತು ಆಲ್ರೌಂಡರ್
ಇನ್ನು ಈ ತಂಡದಲ್ಲಿ ವಿವಿಎಸ್ ಲಕ್ಷ್ಮಣ್ ಹಾರ್ದಿಕ್ ಪಾಂಡ್ಯ ಅವರನ್ನು ಆರನೇ ಕ್ರಮಾಂಕದಲ್ಲಿ ಹೆಸರಿಸಿದ್ದಾರೆ. ಆದರೆ ಬೆನ್ನು ನೋವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಕಣಕ್ಕಿಳಿಯುವುದು ಅನುಮಾನ. ಪೂರ್ಣಪ್ರಮಾಣದ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಕೃಣಾಲ್ ಪಾಂಡ್ಯ ಅವರನ್ನು ಆಲ್ರೌಂಡರ್ ಆಗಿ ಹೆಸರಿಸಲಾಗಿದೆ
ಬೌಲಿಂಗ್ ವಿಭಾಗ
ಇನ್ನು ಬೌಲಿಂಗ್ ವಿಭಾಗದಲ್ಲಿ ಉಪನಾಯಕ ಭುವನೇಶ್ವರ್ ಕುಮಾರ್ ನೇತೃತ್ವ ವಹಿಸಲಿದ್ದು ವೇಗದ ಬೌಲರ್ ಆಗಿ ದೀಪಕ್ ಚಾಹರ್ ಸಾಥ್ ನೀಡಲಿದ್ದಾರೆ. ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಅವರನ್ನು ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವಿವಿಎಸ್ ಲಕ್ಷ್ಮಣ್ ಹೆಸರಿಸಿದ್ದಾರೆ.