ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅಗ್ರೆಸ್ಸಿವ್ ಆಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅಂಗಳದಲ್ಲಿ ಎದುರಾಳಿಗಳನ್ನು ತಮ್ಮ ಮಾತಿನ ಮೂಲಕ ಅನೇಕ ಸಂದರ್ಭದಗಳಲ್ಲಿ ತಿವಿದಿದ್ದಾರೆ. ಆದರೆ ಭಾರತದ ವಿರುದ್ದದ ಸರಣಿಯಲ್ಲಿ ಡೇವಿಡ್ ವಾರ್ನರ್ ಪ್ರತಿಜ್ಷೆಯೊಂದನ್ನು ಮಾಡಿದ್ದಾರೆ.
ಹೌದು, ಡೇವಿಡ್ ವಾರ್ನರ್ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದಾರೆ. ಅದರಲ್ಲೂ ಭಾರತದ ವಿರುದ್ದದ ಸರಣಿಯಲ್ಲಿ ತಾನು ತನ್ನ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿ ಅವರು ಪ್ರತಿಜ್ಞೆಯನ್ನು ಮಾಡಿದ್ದಾರೆ. ಈ ಮೂಲಕ ಭಾರತದ ಸರಣಿಗೂ ಮುನ್ನ ವಾರ್ನರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್
ಭಾರತದ ವಿರುದ್ಧದ ಸರಣಿಯಲ್ಲಿ ನಾನು ನನ್ನ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇನೆ. ವಿರಾಟ್ ಕೊಹ್ಲಿ ಪಡೆ ಮಾತಿನ ಮೂಲಕ ಕೆಣಕಿದರೂ ಕೂಡ ಅದಕ್ಕೆ ಬ್ಯಾಟ್ನಿಂದಲೇ ಉತ್ತರವನ್ನು ನೀಡುವುದಾಗಿ ಡೇವಿಡ್ ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ. ನಾವು ಕಳೆದ ಬಾರಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಭಾರತ ತಂಡ ಕೂಡ ನಮ್ಮನ್ನು ಇದೇ ರೀತಿಯ ತಂತ್ರವನ್ನು ಮಾಡಿತ್ತು ಎಂದಿದ್ದಾರೆ ವಾರ್ನರ್.
ನಾವು ಇದನ್ನು ಕಾಲಕ್ರಮೇಣ ಕಲಿಯುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ನಾನು. ಮಾತಿನ ಚಕಮಕಿಯ ಮೂಲಕ ನಮ್ಮನ್ನು ಕೆಣಕುವ ಪ್ರಯತ್ನ ಮಾಡಿದರೆ ಅದಕ್ಕೆ ಪ್ರತಿಯಾಗಿ ಬ್ಯಾಟ್ನಿಮದ ಉತ್ತರವನ್ನು ನೀಡಬೇಕು, ಆಗ ಎದುರಾಳಿಯ ಪ್ರಯತ್ನವನ್ನು ಹಿಮ್ಮೆಟ್ಟಿಸಬಹುದು ಎಂದು ವಾರ್ನರ್ ಹೇಳಿದ್ದಾರೆ.
ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್ಬ್ಯಾಕ್ ಸಾಧ್ಯತೆ
ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಂಡರೆ ಅದರ ಒತ್ತಡ ತಂಡದ ಇತರ ಸದಸ್ಯರ ಮೇಲೆ ಬೀಳುತ್ತದೆ. ಹಾಗಾಗಿ ಎದುರಾಳಿ ತಂಡದ ಬಗ್ಗೆ ಮತ್ತಷ್ಟು ಗೌರವಯುತವಾಗಿ ಹಾಗೂ ವಿನಮ್ರವಾಗಿ ವರ್ತಿಸಬೇಕು ಎಂದು ಡೇವಿಡ್ ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ.