ಲಂಡನ್, ಜುಲೈ 15: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಹಿಂದೆಂದೂ ಕಂಡರಿಯದ ರೀತಿಯ ಅದ್ಭುತ ಅಂತ್ಯ ಕಂಡಿತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ರನ್ಗಳಿಕೆಯಲ್ಲಿ ನಿಗದಿತ ಓವರ್ಗಳು ಮತ್ತು ಇದೇ ಮೊದಲ ಬಾರಿ ಬಳಕೆಗೆ ತಂದ ಸೂಪರ್ ಓವರ್ನಲ್ಲೂ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ್ದ ತಂಡದ ಎಂಬ ಮಾತ್ರಕ್ಕೆ ವಿಶ್ವಕಪ್ ಕಿರೀಟ ಆತೀಥೇಯ ಇಂಗ್ಲೆಂಡ್ ಮುಡಿಗೇರಿತ್ತು.
ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್ ಆಟಗಾರ!
ಇನ್ನು ಹಾವುಏಣಿಯಂತೆ ಸಾಗಿದ ಪಂದ್ಯದಲ್ಲಿ ಅತ್ಯಂತ ನಾಟಕೀಯ ರೀತಿಯಲ್ಲಿ ಟ್ರೋಫಿ ಎತ್ತಿ ಹಿಡಿದ ಬಳಿಕ ಮಾತನ ನಾಡಿದ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್, ತಮ್ಮ ತಂಡದ ಗೆಲುವಿಗೆ "ಅಲ್ಲಾ ಬೆಂಬಲವೂ ಇತ್ತು" ಎಂದು ಹೇಳಿದ್ದಾರೆ.
"ಟ್ರೋಫಿ ನಮ್ಮ ಬಳಿ ಇರಬಹುದು. ಆದರೆ, ನ್ಯೂಜಿಲೆಂಡ್ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ನಮಗಿಂತಲೂ ಉತ್ತಮವಾಗಿ ಆಡಿ ಫೈನಲ್ ತಲುಪಿತ್ತು. ಆದರೆ ಅದೃಷ್ಟ ಇಂದು ನಮ್ಮ ಬಳಿ ಇದೆ," ಎಂದು ಮಾತುಗಳನ್ನು ಆರಂಭಿಸಿದ ಮಾರ್ಗನ್, "ನ್ಯೂಜಿಲೆಂಡ್ ಲೀಗ್ ಹಂತದಲ್ಲಿ ಅದ್ಭುತವಾಗಿ ಆಡಿದೆ. ಅದರಲ್ಲೂ ಸೆಮಿಫೈನಲ್ಸ್ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದ್ದು ಭಾರತ ವಿರುದ್ಧ ದಿಟ್ಟ ಪ್ರದರ್ಶನ ನೀಡಿತ್ತು," ಎಂದರು.
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2019: ಕೇನ್ ವಿಲಿಯಮ್ಸನ್ ಎಂಬ ಅದ್ಭುತ!
ಇನ್ನು ಫೈನಲ್ ಪಂದ್ಯದಲ್ಲಿನ ಅದೃಷ್ಟದ ಕುರಿತಾಗಿ ಮಾತನಾಡಿದ ಕ್ಯಾಪ್ಟನ್ ಮಾರ್ಗನ್, "ನಮಗೆ ಅಲ್ಲಾ ಬೆಂಬಲವಿತ್ತು. ನಾನು ಆದಿಲ್ ರಶೀದ್ ಬಳಿ ಮಾತನಾಡುವಾಗ ರಶೀದ್ ನಮ್ಮ ಪಾಲಿಗೆ ಅಲ್ಲಾ ಖಂಡಿತಾ ಇದ್ದಾನೆ ಎಣದಿದ್ದರು. ನಾನು ಖಂಡಿತಾ ಅದೃಷ್ಟ ನಮ್ಮ ಬಳಿ ಇದೆ ಎಂದಿದ್ದೆ," ಎಂದು ನಗುತ್ತಲೇ ಮಾರ್ಗನ್ ತಮ್ಮ ಗೆಲುವಿನ ಹಿಂದಿರುವ ಬಲವನ್ನು ವಿವರಿಸಿದರು.
ಸೂಪರ್ ಓವರ್ನಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್
ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡ 44 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ನ್ಯೂಜಿಲೆಂಡ್ ತಂಡ ಸತತ ಎರಡನೇ ಬಾರಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.