ಎಡವುತ್ತಿರುವ ಪಂತ್
ಕೆಟ್ಟ ಹೊಡೆತಗಳಿಗೆ ಮುಂದಾಗಿ ಪಂತ್ ವಿಕೆಟ್ ಒಪ್ಪಿಸುತ್ತಿರುವುದು ಮುಂದುವರೆದಿದೆ. ಹೀಗಾಗಿ ತಂಡ ನಿರ್ವಹಣಾ ಸಮಿತಿ ಇನ್ನುಳಿದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ಗಳಿಗೆ ಅವಕಾಶ ನೀಡುವತ್ತ ಯೋಚಿಸುತ್ತಿದೆ. ಈ ಬಗ್ಗೆ ಎಂಎಸ್ಕೆ ಪ್ರಸಾದ್ ಅವರೇ ಬಾಯ್ಬಿಟ್ಟಿದ್ದಾರೆ.
ಇನ್ನಷ್ಟು ಅವಕಾಶ ನೀಡಬೇಕಿದೆ
ಪಂತ್ ಬಗ್ಗೆ ಮಾತನಾಡಿದ ಪ್ರಸಾದ್, 'ನಾವು ಈ ಮೊದಲೇ ಹೇಳಿದ್ದೇವೆ. ವಿಶ್ವಕಪ್ ಬಳಿಕ ಪಂತ್ ಸುಧಾರಣೆ-ಬೆಳವಣಿಗೆ ಬಗ್ಗೆ ಗಮನಹರಿಸುತ್ತಿದ್ದೇವೆ ಎಂದು. ಪಂತ್ ಪ್ರತಿಭಾನ್ವಿತ ಆಟಗಾರನಾಗಿರುವುದರಿಂದ ನಾವು ತಾಳ್ಮೆಯಿಂದ ಕಾಯಬೇಕಿದೆ. ಪಂತ್ಗೆ ಇನ್ನಷ್ಟು ಅವಕಾಶ ನೀಡಬೇಕಿದೆ,' ಎಂದರು.
ಪಂತ್ಗೆ ಕೆಲಸದ ಹೊರೆ
ಪಂತ್ ಕಳಪೆ ಪ್ರದರ್ಶನಕ್ಕೆ ಕೆಲಸದ ಒತ್ತಡವೂ ಕಾರಣ ಎಂಬುದನ್ನು ಆಯ್ಕೆ ಸಮಿತಿ ಮನಗಂಡಿದೆ. ಮಾತು ಮುಂದುವರೆಸಿದ ಎಂಎಸ್ಕೆ, 'ಪಂತ್ ಕೆಲಸದ ಹೊರೆ ಇಳಿಸುವತ್ತ ಯೋಚಿಸುತ್ತಿದ್ದೇವೆ. ಪಂತ್ಗೆ ಬೆಂಬಲವಾಗಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಯುವ ವಿಕೆಟ್ ಕೀಪರ್ಗಳನ್ನು ತಯಾರಿಸುವುದರಲ್ಲಿದ್ದೇವೆ,' ಎಂದರು.
ಮೂರು ಯುವ ಕೀಪರ್ಗಳು
'ಭಾರತ 'ಎ' ತಂಡದಲ್ಲಿರುವ ಕೆಎಲ್ ಭರತ್ ದೀರ್ಘ ಕ್ರಿಕೆಟ್ ಮಾದರಿಗೆ ಸೂಕ್ತರಿದ್ದಾರೆ. ನಿಗದಿತ ಓವರ್ಗಳ ಮಾದರಿಗೆ ನಮ್ಮಲ್ಲಿ ಭಾರತ 'ಎ' ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ,' ಎಂದು ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ. ಈ ಮೂವರು ಮುಂಬರುವ ದಿನಗಳಲ್ಲಿ ಪಂತ್ಗೆ ಬೆಂಬಲ ವಿಕೆಟ್ ಕೀಪರ್ಗಳಾಗಿ ಇರಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಜವಾಬ್ದಾರಿ ಹೊರಲಿದ್ದಾರೆ.