ಒತ್ತಡ ನಿಭಾಯಿಸಬಲ್ಲ ಆಟಗಾರರು
"ಒತ್ತಡದ ಪಂದ್ಯಗಳಲ್ಲಿ ಇಬ್ಬರು ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದರೆ ಅಂತಾ ಆಟಗಾರರ ಸ್ಥಾನವನ್ನು ತುಂಬಲು ಇತರ ಆಟಗಾರರು ಸಿದ್ದರಿರಬೇಕಾಗುತ್ತದೆ ಹಾಗೂ ತಂಡಕ್ಕಾಗಿ ನೀವು ಕೂಡ ಆ ಜವಾಬ್ಧಾರಿಯನ್ನು ನಿರ್ವಹಿಸಲು ಸಾಧ್ಯವಿದೆ ಎಂದು ನಂಬಿಕೆ ಬರುವಂತೆ ಮಾಡಬೇಕು" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮತ್ತಷ್ಟು ಮ್ಯಾಚ್ ವಿನ್ನರ್ಗಳು ಬೇಕು
ಭಾರತೀಯ ಕ್ರಿಕೆಟ್ನ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಲ್ಲಿ ಮ್ಯಾಚ್ವಿನ್ನರ್ಗಳ ಸಂಖ್ಯೆ ಕಡಿಮೆಯಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೊಹಿತ್ ಶರ್ಮಾ ಅವರನ್ನು ಹೊರತುಪಡಿಸಿ ಮತ್ತಷ್ಟು ಮ್ಯಾಚ್ವಿನ್ನರ್ಗಳು ತಂಡಕ್ಕೆ ಅಗತ್ಯವಿದ್ದಾರೆ. ಕೆಎಲ್ ರಾಹುಲ್ ಅವರಂತೆ ಮತ್ತಷ್ಟು ಮ್ಯಾಚ್ವಿನ್ನರ್ಗಳನ್ನು ತಂಡ ರೂಪಿಸಬೇಕಿದೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಇರಬಾರದು
ಇನ್ನು ಇದೇ ಸಂದರ್ಭದಲ್ಲಿ 2011ರ ವಿಶ್ವಕಪ್ನಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದ ಸಂಗತಿಯನ್ನು ಹೇಳಿದರು. ಅಂದು ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಎಂಎಸ್ ಧೋನಿ ಸಹಿತ ಅನೇಕ ಸ್ಟಾರ್ ಆಟಗಾರರು ಇದ್ದರು. ಇವರೆಲ್ಲಾ ಯಾವುದೇ ದಿನದಲ್ಲಾದರೂ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲಂತಾ ಕ್ಷಮತೆಯನ್ನು ಹೊಂದಿದ್ದರು.
2011ರ ವ ವಿಶ್ವಕಪ್ ಘಟನೆ ನೆನಪಿಸಿದ ಭಜ್ಜಿ
2011ರ ವಿಶ್ವಕಪ್ನಲ್ಲಿ ಅದೇ ಆಗಿತ್ತು. ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಶೀಘ್ರವಾಗಿ ವಿಕೆಟ್ ಒಪ್ಪಿಸಿದ್ದರು. ಆದರೆ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ನಮಗೆ ಗೌತಮ್ ಗಂಭೀರ್ ಈ ಜವಾಬ್ಧಾರಿಯನ್ನು ನಿರ್ವಹಿಸಬಲ್ಲರು, ಎಂಎಸ್ ಧೋನಿ ಈ ಜವಾಬ್ಧಾರಿಯನ್ನು ನಿರ್ವಹಿಸಬಲ್ಲರು ಅಥವಾ ಯುವರಾಜ್ ಸಿಂಗ್ ಖಂಡಿತಾ ಈ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೆಲ್ಲರಿಂದಲೂ ಸಾಧ್ಯವಾಗದಿದ್ದರೆ ನಾನು ಅದನ್ನು ಮಾಡುತ್ತೇನೆ. ಈ ನಂಬಿಕೆ ಪ್ರತಿಯೊಬ್ಬ ಆಟಗಾರನಲ್ಲೂ ಬಂದಿತ್ತು ಎಂದು ಹರ್ಭಜನ್ ಸಿಂಗ್ ವಿವರಿಸಿದ್ದಾರೆ.