ನೋವು, ಅವಮಾನ
ಭಾರತ ಪ್ರವಾಸಕ್ಕೆ ತೆರಳುವ ಮುನ್ನ ಮತ್ತು ಟೂರ್ನಿ ಆರಂಭವಾದ ಮೇಲೂ ನಾವು ಸಾಕಷ್ಟು ನೋವು, ಅವಮಾನವನ್ನು ಎದುರಿಸಿದೆವು. ಟ್ರೋಫಿ ಗೆಲ್ಲುವ ಮೂಲಕ ನಮ್ಮನ್ನು ಹೀಯಾಳಿಸಿದವರಿಗೆ ಅತ್ಯುತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ಕಪ್ ಗೆದ್ದ ಸಂಭ್ರಮದ ನಡುವೆಯೂ ಸಮಿ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಬುದ್ದಿಹೀನ ಕ್ರಿಕೆಟಿಗರು
ಇಂಗ್ಲೆಂಡಿನ ಹಿರಿಯ ವೀಕ್ಷಕ ವಿವರಣೆಗಾರ ಮಾರ್ಕ್ ನಿಕೋಲಸ್ ನಮ್ಮನ್ನು ಬುದ್ದಿಹೀನ ಕ್ರಿಕೆಟಿಗರು ಎಂದು ಹೀಯಾಳಿಸಿದ್ದರು. ಅವರು ಹಿರಿಯರು, ಅವರ ಬಗ್ಗೆ ನಮಗೆ ಸಾಕಷ್ಟು ಗೌರವವಿದೆ. ಬುದ್ದಿಹೀನ ಕ್ರಿಕೆಟಿಗರು ಇಂದು ವಿಶ್ವ ಚಾಂಪಿಯನ್ನರಾಗಿ ಹೊರಹೊಮ್ಮಿದ್ದೇವೆ ಎಂದು ಡರೆನ್ ಸಮಿ ಪ್ರತ್ಯುತ್ತರ ನೀಡಿದ್ದಾರೆ.
ಜರ್ಸಿ ಇರಲಿಲ್ಲ
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದ ನಮಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ನಮ್ಮ ದೇಶದ ಪ್ರಧಾನಿ ಆಲ್ ದಿ ಬೆಸ್ಟ್ ಈಮೇಲ್ ಸಂದೇಶ ಕಳುಹಿಸಿದ್ದರು, ಮಂಡಳಿಯಿಂದ ತಂಡಕ್ಕೆ ಸ್ಪೂರ್ತಿ ನೀಡುವ ಯಾವುದೇ ಸಂದೇಶ ಬಂದಿರಲಿಲ್ಲ. ನಾವು ಭಾರತ ಪ್ರವಾಸಕ್ಕೆ ತೆರಳಿದಾಗ ನಮಗೆ ಜರ್ಸಿಯೂ ಇರಲಿಲ್ಲ - ಡರೆನ್ ಸಮಿ.
ಮತ್ತೆ ಯಾವಾಗ ಜರ್ಸಿ ಧರಿಸುತ್ತೇನೋ
ವಿಶ್ವಕಪ್ ಮುಗಿದಿದೆ, ಈ ವರ್ಷದಲ್ಲಿ ಇದುವರೆಗೆ ಯಾವುದೇ ಟಿ20 ವೇಳಾಪಟ್ಟಿ ಅಂತಿಮವಾಗಿಲ್ಲ. ನಮ್ಮ ಮತ್ತು ಮಂಡಳಿಯ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಗೆದ್ದ ಈ ತಂಡದೊಂದಿಗೆ ಯಾವಾಗ ಮತ್ತೆ ಕಣಕ್ಕಿಳಿಯುತ್ತೇನೆ ಅನ್ನುವುದು ಗೊತ್ತಿಲ್ಲ. ಯಾವಾಗ ಮತ್ತೆ ಟಿ20 ಆಡುತ್ತೇವೆಯೋ ಅದೂ ತಿಳಿದಿಲ್ಲ - ವೆಸ್ಟ್ ಇಂಡೀಸ್ ತಂಡದ ನಾಯಕ ಸಮಿ.
ಎಲ್ಲರೂ ಮ್ಯಾಚ್ ವಿನ್ನರ್ಸ್
ನಮ್ಮ ತಂಡದಲ್ಲಿ ಇರುವವರೆಲ್ಲಾ ಮ್ಯಾಚ್ ವಿನ್ನರ್ಸ್ ಗಳು. ಈ ಎಲ್ಲಾ ಆಟಗಾರರನ್ನು ಮತ್ತೆ ಯಾವಾಗ ನಾನು ಡ್ರೆಸ್ಸಿಂಗ್ ರೂಂನಲ್ಲಿ ನೋಡುತ್ತೇನೋ ಗೊತ್ತಿಲ್ಲ. ಮುಂದಿನ ಸರಣಿಗೆ ನಾನು ಆಯ್ಕೆಯಾಗುತ್ತೇನೋ ಅನ್ನುವುದು ಖಾತ್ರಿಯಿಲ್ಲ - ಡರೆನ್ ಸಮಿ.