ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ಓರ್ವ ಆಟಗಾರನನ್ನು ಆಯ್ಕೆ ಮಾಡದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ದೇಶೀಯ ಕ್ರಿಕೆಟ್ನ ಸುದೀರ್ಘ ಮಾದರಿಯಾದ ರಣಜಿ ಟ್ರೋಫಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಐಪಿಎಲ್ನಲ್ಲಿಯೂ ಉತ್ತಮ ಆಟವನ್ನು ಪ್ರದರ್ಶಿಸಿರುವ ಜಯ್ದೇವ್ ಉನಾದ್ಕಟ್ ವಿಚಾರವಾಗಿ ದೊಡ್ಡ ಗಣೇಶ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜಯ್ದೇವ್ ಉನಾದ್ಕಟ್ ಅತ್ಯುತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಆಯ್ಕೆಯಾದಿರುವ ಬಗ್ಗೆ ಕನ್ನಡಿಗ ವೇಗಿ ದೊಡ್ಡ ಗಣೇಶ್ ಧ್ವನಿಯೆತ್ತಿದ್ದಾರೆ.
ಕೊವಿಡ್ ವಿರುದ್ಧದ ಹೋರಾಟಕ್ಕೆ ವಿರುಷ್ಕಾ ಜೊತೆ ಕೈಜೋಡಿಸಿದ ಚಹಾಲ್
"ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಜಯ್ದೇವ್ ಉನಾದ್ಕಟ್ ಇನ್ನೇನಯು ಮಾಡಬೇಕಿದೆ? ದೇಶೀಯ ಕ್ರಿಕೆಟ್ನಲ್ಲಿ ಉನಾದ್ಕಟ್ ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಪ್ರದರ್ಶನ ನಿಡುತ್ತೊರುವ ಹೊರತಾಗಿಯೂ ಅವರನ್ನು ಕಡೆಗಣನೆ ಮಾಡುತ್ತಿರುವುದನ್ನು ನೋಡಲು ಕಷ್ಟವಾಗುತ್ತದೆ" ಎಂದು ದೊಡ್ಡ ಗಣೇಶ್ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ದೊಡ್ಡ ಗಣೇಶ್ ಅವರ ಈ ಟ್ವೀಟ್ಗೆ ಸ್ವತಃ ಉನಾದ್ಕಟ್ ತಕ್ಷಣವೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ನಿಮ್ಮ ಕಾಳಜಿ ನನಗೆ ಪತ್ತಷ್ಟು ಪ್ರೇರಣೆಯನ್ನು ನೀಡುತ್ತದೆ. ಅದನ್ನು ಮುಂದಿನ ಋತುವಿನಲ್ಲಿ ವ್ಯಕ್ತಪಡಿಸುತ್ತೇನೆ" ಎಂದು ಟ್ವೀಟ್ನಲ್ಲಿ ಉತ್ತರಿಸಿದ್ದಾರೆ.
ಜಯದೇವ್ ಉನಾದ್ಕಟ್ ಈವರೆಗೆ 89 ಪ್ರಥಮದರ್ಜೆ ಪಂದ್ಯಗಳಲ್ಲಿ ಆಡಿದ್ದು 327 ವಿಕೆಟ್ಗಳನ್ನು ಸಂಪಾದಿಸಿದ್ದಾರೆ. 20 ಬಾರಿ 5 ವಿಕೆಟ್ಗಳ ಗೊಂಚಲು ಹಾಗೂ 5 ಬಾರಿ 10 ವಿಕೆಟ್ಗಳ ಗೊಂಚಲು ಪಡೆದುಕೊಂಡಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ 4 ಪಂದ್ಯಗಳನ್ನು ಆಡಿರುವ ಉನಾದ್ಕಟ್ 4 ವಿಕೆಟ್ ಸಂಪಾದಿಸಿದ್ದಾರೆ.