ಜಯಾ ಭಾರದ್ವಾಜ್ ಯಾರು?
ದುಬೈ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮುಗಿದ ಬಳಿಕ ದೀಪಕ್ ಚಹರ್ ಪ್ರೇಮ ನಿವೇದನೆ ಮಾಡಿದ ಜಯಾ ಭಾರದ್ವಾಜ್ ಮೂಲತಃ ದೆಹಲಿಯವರು. ಈಕೆ ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಮತ್ತು ಎಂಟಿವಿಯ ಪ್ರಸಿದ್ಧ ಸ್ಪ್ಲಿಟ್ ವಿಲ್ಲಾ 2ನ ವಿನ್ನರ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ಮುಂಬೈನ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದುಕೊಂಡಿರುವ ಜಯ ಭಾರದ್ವಾಜ್ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ತಮ್ಮ ತಂಡದ ಆಟಗಾರರಿಗೆ ವರ್ಷದ ಆರಂಭದಲ್ಲಿಯೇ ಗೆಳತಿಯನ್ನು ಪರಿಚಯಿಸಿದ್ದರು ದೀಪಕ್ ಚಹಾರ್
ಇನ್ನು ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರನ್ನು ಈ ವರ್ಷದ ಆರಂಭದಲ್ಲಿಯೇ ಟೀಮ್ ಇಂಡಿಯಾದ ಕೆಲ ಆಟಗಾರರಿಗೆ ಪರಿಚಯವನ್ನು ಮಾಡಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ ಆರಂಭವಾದಾಗಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಗೂ ತಮ್ಮ ಗೆಳತಿಯನ್ನು ದೀಪಕ್ ಚಹರ್ ಪರಿಚಯಿಸಿದ್ದರಂತೆ. ಹಾಗೂ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಗಿದ ಬಳಿಕ ಇಬ್ಬರೂ ವಿವಾಹ ಬಂಧನಕ್ಕೊಳಗಾಗುವ ಯೋಜನೆಯನ್ನು ಸಹ ಹಾಕಿಕೊಂಡಿದ್ದರಂತೆ.
ಈ ಪ್ರಪೋಸ್ ಹಿಂದೆ ಇತ್ತು ಎಂ ಎಸ್ ಧೋನಿ ಪ್ಲಾನ್!
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿಯೇ ಜಯಾ ಭಾರದ್ವಾಜ್ ಅವರಿಗೆ ದೀಪಕ್ ಚಹರ್ ಪ್ರೇಮ ನಿವೇದನೆಯನ್ನು ಮಾಡಿದರು. ಆದರೆ ಅಸಲಿ ವಿಷಯವೇನೆಂದರೆ ಪ್ಲೇ ಆಫ್ ಪಂದ್ಯದಲ್ಲಿ ಜಯ ಭಾರದ್ವಾಜ್ ಅವರಿಗೆ ಪ್ರೇಮನಿವೇದನೆ ಮಾಡುವ ಪ್ಲಾನ್ ಹೊಂದಿದ್ದರಂತೆ ದೀಪಕ್ ಚಹರ್. ಹೌದು ಪ್ಲೇ ಆಫ್ ಸುತ್ತಿನ ಪಂದ್ಯದಲ್ಲಿ ಜಯಾ ಭಾರದ್ವಾಜ್ ಅವರಿಗೆ ಪ್ರೇಮನಿವೇದನೆ ಮಾಡುವ ಯೋಚನೆಯನ್ನು ದೀಪಕ್ ಚಹರ್ ಹಾಕಿಕೊಂಡಿದ್ದರಂತೆ ಆದರೆ, ಎಂಎಸ್ ಧೋನಿ ಪ್ಲೇ ಆಫ್ ಪಂದ್ಯದಲ್ಲಿ ಬೇಡ ಇಂದಿನ ಪಂದ್ಯದಲ್ಲಿಯೇ ಪ್ರೇಮ ನಿವೇದನೆಯನ್ನು ಮಾಡು ಎಂದು ದೀಪಕ್ ಚಹರ್ ಅವರಿಗೆ ಸಲಹೆಯನ್ನು ನೀಡಿದರಂತೆ. ಹೀಗಾಗಿಯೇ ದೀಪಕ್ ಚಹರ್ ತಮ್ಮ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕವೇ ಜಯಾ ಭಾರದ್ವಾಜ್ ಅವರಿಗೆ ಪ್ರಪೋಸ್ ಮಾಡಿದ್ದಾರೆ.