ಈ 3 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಮಾಡಿಕೊಳ್ಳಬೇಕು
ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದೇವದತ್ ಪಡಿಕ್ಕಲ್ ಈ ಮೂವರು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದು ಬ್ರಿಯಾನ್ ಲಾರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಎಬಿ ಡಿವಿಲಿಯರ್ಸ್ ಉಳಿಸಿಕೊಳ್ಳುವ ಅಗತ್ಯವಿಲ್ಲ
ಹೀಗೆ ಮೂವರು ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಳ್ಳಬೇಕು ಎಂದಿರುವ ಬ್ರಿಯಾನ್ ಲಾರಾ ಎಬಿ ಡಿವಿಲಿಯರ್ಸ್ ಅವರನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ಇಲ್ಲ ಎಂದಿದ್ದಾರೆ. 'ಎಬಿ ಡಿವಿಲಿಯರ್ಸ್ ರನ್ ಬಾರಿಸುತ್ತಿಲ್ಲ ಎಂದಮೇಲೆ ಅವರನ್ನು ಉಳಿಸಿಕೊಳ್ಳುವ ಅಗತ್ಯತೆ ಏನಿದೆ. ವರ್ಷದಲ್ಲಿ ಕೇವಲ 6 ವಾರಗಳು ಮಾತ್ರ ಕ್ರಿಕೆಟ್ ಆಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ರನ್ ಗಳಿಸಲು ಆಗುವುದಿಲ್ಲ. ಕ್ರಿಸ್ ಗೇಲ್ ಹಲವಾರು ಫ್ರಾಂಚೈಸಿ ಕ್ರಿಕೆಟ್ ಲೀಗ್ಗಳಲ್ಲಿ ಭಾಗವಹಿಸಿದರೂ ಅವರಿಗೆ ಉತ್ತಮ ರನ್ ಗಳಿಸಲು ಆಗುತ್ತಿಲ್ಲ, ಇನ್ನು ವರ್ಷದಲ್ಲಿ ಕೇವಲ 6 ವಾರಗಳಲ್ಲಿ ಮಾತ್ರ ಕ್ರಿಕೆಟ್ ಆಡುವ ಎಬಿ ಡಿವಿಲಿಯರ್ಸ್ ಉತ್ತಮ ರನ್ ಗಳಿಸಲು ಹೇಗೆ ಸಾಧ್ಯ' ಎಂದು ಬ್ರಿಯಾನ್ ಲಾರಾ ಹೇಳಿಕೆ ನೀಡಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಮಂಕಾದ ಎಬಿಡಿ
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ಮಂಕಾಗಿರುವ ಎಬಿ ಡಿವಿಲಿಯರ್ಸ್ ತಮ್ಮ ಕೊನೆಯ 8 ಪಂದ್ಯಗಳಲ್ಲಿ ಕ್ರಮವಾಗಿ 26, 19*, 23, 4*, 11, 12 ಮತ್ತು 0 ರನ್ ಗಳಿಸಿದ್ದಾರೆ. ಹೀಗೆ ಕಳೆದ 8 ಪಂದ್ಯಗಳಲ್ಲಿ ಸತತವಾಗಿ ಎಬಿ ಡಿವಿಲಿಯರ್ಸ್ ಉತ್ತಮ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ.