ಬೆವರು 'ಓಕೆ'ಗೆ ಬೌಲರ್ಗಳು ಬೇಸರ
ಚೆಂಡಿನ ಹೊಳಪು ಹೆಚ್ಚಿಸಲು ಆಟಗಾರರು ಬೆವರು ತಾಗಿಸಬಹುದು, ಆದರೆ ಎಂಜಲು ತಾಗಿಸಕೂಡದು ಎಂದು ಐಸಿಸಿ ಎಚ್ಚರಿಸಿರುವುದು ಬಹಳಷ್ಟು ಆಟಗಾರರಿಗೆ ಬೇಸರ ತಂದಿದೆ. ಇದೇ ಕಾರಣಕ್ಕೆ ಚರ್ಚೆಗಳಾಗುತ್ತಿರುವುದು. ಹಾಗಾದರೆ ಬೌಲರ್ಗಳು ಚೆಂಡಿಗೆ ಎಂಜಲು ಸವರುವುದೇಕೆ? ಅದರ ಮಹತ್ವವೇನು? ಭಾರತದ ಕ್ರಿಕೆಟಿಗರು ವಿವರಿಸಿದ್ದಾರೆ.
ಮೊಹಮ್ಮದ್ ಶಮಿ ವಿವರಣೆ
ಇಂಡಿಯಾ ಟುಡೇಯ 'ಸಲಾಮ್ ಕ್ರಿಕೆಟ್' ಶೋನಲ್ಲಿ ಮಾತನಾಡಿದ ಭಾರತದ ವೇಗಿ ಮೊಹಮ್ಮದ್ ಶಮಿ, ಇರ್ಫಾನ್ ಪಠಾಣ್ ಕ್ರಿಕೆಟ್ನಲ್ಲಿ ಎಂಜಲಿನ ಬಳಕೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ. 'ಚೆಂಡನ್ನು ಭಾರವಾಗಿ ಮತ್ತು ಮೃದುವಾಗಿಸಲು ನಾವು ಬೆವರು ಬಳಸುತ್ತೇವೆ ಆದರೆ ರಿವರ್ಸ್ ಸ್ವಿಂಗ್ಗೆ ಲಾಲಾರಸ ಬೇಕು,' ಎಂದು ಶಮಿ ಹೇಳಿದ್ದಾರೆ.
ನಿಷೇಧ ನಮಗೆ ಸವಾಲಾಗಿದೆ.
ಮಾತು ಮುಂದುವರೆಸಿದ ಶಮಿ, 'ಲಾಲಾರಸ ಚೆಂಡನ್ನು ಕಠಿಣಗೊಳಿಸುತ್ತದೆ, ಹೊಳೆಯುವಂತೆ ಮಾಡುತ್ತದೆ. ಚೆಂಡಿನ ರಿವರ್ಸ್ಗೂ ನೆರವಾಗುತ್ತದೆ. ಈಗ ಎಂಜಲಿನ ಬಳಕೆ ನಿಷೇಧಿಸಿರುವುದು ನಮಗೆ ಬಹುದೊಡ್ಡ ಸವಾಲಾಗಿದೆ,' ಎಂದರು. ಎಂಜಲು ನಿಷೇಧ ತಾತ್ಕಾಲಿಕವಾಗಿರಬಹುದೇನೋ. ಆದರೆ ಕೊರೊನಾ ಕಾರಣ ಸದ್ಯಕ್ಕಂತೂ ಬೌಲರ್ಗಳು ಈ ನಿಯಮ ಪಾಲಿಸಲೇಬೇಕಾಗಿದೆ.
ಬೌಲರ್ ಫ್ರೆಂಡ್ಲಿ ಪಿಚ್ ಬೇಕು
'ಈ ಹೊಸ ಬದಲಾವಣೆ ಆಟದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎಂಜಲು ಬಳಸಿದಂತೆ ಬೆವರಿನಲ್ಲಿ ಚೆಂಡು ಗಾಳಿಯನ್ನು ಸೀಳಿ ಸಾಗುವುದಿಲ್ಲ. ಮುಖ್ಯವಾಗಿ ಬೆವರಿನ ಬಳಕೆ ರಿವರ್ಸ್ ಸ್ವಿಂಗ್ ವಿಚಾರದಲ್ಲಿ ಎಂಜಲಿನಷ್ಟು ಪರಿಣಾಮಕಾರಿಯಲ್ಲ. ಹೀಗಾಗಿ ನಿಯಮ ಬದಲಾವಣೆ ಟೆಸ್ಟ್ನಲ್ಲಿ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಪಿಚ್ಗಳನ್ನು ಆರಿಸುವಾಗ ಬೌಲರ್ಗಳ ಫ್ರೆಂಡ್ಲಿ ಪಿಚ್ಗಳನ್ನು ಆರಿಸುವುದು ಐಸಿಸಿ ಜವಾಬ್ದಾರಿಯಾಗಿದೆ,' ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.