ಆಡುವಾಗ ಶ್ರೇಷ್ಠ ಭಾವನೆ
'ಖಂಡಿತವಾಗಿಯೂ. ಭಾರತೀಯ ಆಟಗಾರರ ಜೊತೆ ಆಡೋದು, ಅವರ ಜೊತೆ ಇರೋದು ಶ್ರೇಷ್ಠ ಭಾವನೆ ಮೂಡಿಸುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿರುವ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ಮಂಡಳಿ ಅನುಮತಿ ನೀಡುವುದರಿಂದ ಪಂದ್ಯಾಟದಲ್ಲಿ ಕೆಲವಾದರೂ ಆಟಗಾರರು ಪಾಲ್ಗೊಳ್ಳುತ್ತಾರೆ ಎಂದು ಭಾವಿಸಿದ್ದೇನೆ,' ಎಂದು ರಶೀದ್ ಹೇಳಿದ್ದಾರೆ.
ಮಿಸ್ ಮಾಡಿಕೊಳ್ಳುತ್ತಿದ್ದೇನೆ
'ಐಪಿಎಲ್ನಲ್ಲಿ ಭಾರತೀಯ ಕ್ರಿಕೆಟರ್ಗಳ ಜೊತೆಗೆ, ಅವರದೇ ತಂಡದಲ್ಲಿದ್ದು ಆಡಿದ್ದು ಖುಷಿ ನೀಡಿದೆ. ಇಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತ ಖಾನ್ ಹೇಳಿದರು. ಐಪಿಎಲ್ನಲ್ಲಿ ರಶೀದ್ ಖಾನ್ ಅವರು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದರು.
ಬಿಸಿಸಿಐನಿಂದ ಅನುಮತಿಯಿಲ್ಲ
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಭಾರತೀಯ ಕ್ರಿಕೆಟಿಗರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊರತಾಗಿ ಇನ್ಯಾವುದೇ ಟಿ20 ಲೀಗ್ಗಳಲ್ಲಿ ಭಾಗವಹಿಸಲು ಅನುಮತಿ ನೀಡಿಲ್ಲ. ಹೀಗಾಗಿ ಗ್ಲೋಬಲ್ ಟಿ20 (ಜಿ20) ಬ್ರ್ಯಾಂಡ್ಅಂಬಾಸಿಡರ್, ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಯಾನ್ ಲಾರಾ ಬೇಸರ
'ನಾನು ಬಿಸಿಸಿಐಯನ್ನು ಅಥವಾ ಇನ್ಯಾರೇ ಆಟಗಾರರನ್ನು ಟೀಕಿಸಲು ಹೋಗುತ್ತಿಲ್ಲ. ಆದರೆ ಇಂಥ ಟೂರ್ನಿಗಳಲ್ಲಿ ಭಾರತದ ಶ್ರೇಷ್ಠ ಆಟಗಾರರನ್ನು ಕಾಣಲು ವಿಶ್ವ ಬಯಸುತ್ತದೆ. ಕ್ರಿಕೆಟ್ ಟೂರ್ನಿಗಳ ವೇಳೆ ಆಕರ್ಷಣೆ ಮೂಡಿಸುವ ಭಾರತೀಯ ಆಟಗಾರರನ್ನು ಬಿಸಿಸಿಐ ಯಾಕೆ ಅಡಗಿಸಿಡಲು ಯತ್ನಿಸುತ್ತಿದೆಯೋ ನನಗೆ ಗೊತ್ತಾಗುತ್ತಿಲ್ಲ,' ಎಂದು ಲಾರಾ ಹೇಳಿಕೊಂಡಿದ್ದಾರೆ.