ಮ್ಯಾಂಚೆಸ್ಟರ್, ಜುಲೈ 10: ಬ್ಯಾಟಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಟೀಮ್ ಇಂಡಿಯಾ, ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ಗಳ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬುಧವಾರ 211/5ರಿಂದ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್ ತಂಡ ತನ್ನ 50 ಓವರ್ಗಳಲ್ಲಿ 8 ವಿಕೆಟ್ಗೆ 239 ರನ್ಗಳನ್ನು ಗಳಿಸಿತು.
ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ರೋಹಿತ್ ಶರ್ಮಾ (01), ವಿರಾಟ್ ಕೊಹ್ಲಿ (01) ಮತ್ತು ಕೆ.ಎಲ್ ರಾಹುಲ್ (01) ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.
ಆದರೂ, 7ನೇ ವಿಕೆಟ್ಗೆ ಎಂ.ಎಸ್ ಧೋನಿ (50) ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ (77) ನಡುವೆ ಮೂಡಿಬಂದ 104 ಎಸೆತಗಳಲ್ಲಿನ 116 ರನ್ಗಳ ಅದ್ಭುತ ಜೊತೆಯಾಟದ ಮೂಲಕ ಭಾರತ ತಂಡ ಚೇತರಿಸಿತ್ತು. ಆದರೆ, ಇನಿಂಗ್ಸ್ ಅಂತ್ಯದಲ್ಲಿ ತಂಡವನ್ನು ಗುರಿ ಮುಟ್ಟಿಸುವ ಹೊಸ್ತಿಲಲ್ಲ ಧೋನಿ ಅಚ್ಚರಿಯ ರೀತಿಯಲ್ಲಿ ರನ್ಔಟ್ ಆದರು. ಇದರೊಂದಿಗೆ ಭಾರತಕ್ಕೆ ಪಂದ್ಯ ಗೆಲ್ಲುವ ಆಸೆಯೂ ಮುರಿದುಬಿದ್ದಿತು. ಭಾರತ 49.3 ಓವರ್ಗಳಲ್ಲಿ 221 ರನ್ಗಳಿಗೆ ಆಲ್ಔಟ್ ಆಯಿತು.
"ಚೂರು ಪಾಡು ಆಟಗಾರನಲ್ಲ ಜಡೇಜಾ"
ಸೆಮಿಫೈನಲ್ಗೂ ಮುನ್ನ ರವೀಂದ್ರ ಜಡೇಜಾ ಅವರನ್ನು ಚೂರು ಪಾರು ಆಟಗಾರ ಎಂದೆಲ್ಲಾ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೆಕರ್ ಕರೆದಿದ್ದರು. ಇದಕ್ಕೆ ತಮ್ಮ ಆಟದ ಮೂಲಕವೇ ಉತ್ತರ ನೀಡಿದ ಜಡೇಜಾ, ನ್ಯೂಜಿಲೆಂಡ್ ಎದುರು ಬೌಲಿಂಗ್ನಲ್ಲಿ ಒಂದು ವಿಕೆಟ್, ಕ್ಷೇತ್ರ ರಕ್ಷಣೆಯಲ್ಲಿ ಅದ್ಭುತ ಕ್ಯಾಚ್ಗಳು ಮತ್ತು ರನ್ಔಟ್ ಹಾಗೂ ಬ್ಯಾಟಿಂಗ್ನಲ್ಲಿ 59 ಎಸೆತಗಳಲ್ಲಿ ತಲಾ 4 ಫೋರ್ ಮತ್ತು ಸಿಕ್ಸರ್ ನೊಂದಿಗೆ 77 ರನ್ಗಳನ್ನು ಚೆಚ್ಚುವ ಮೂಲಕ ತಂಡವನ್ನು ಇನ್ನೇನು ಗೆಲುವಿನ ದಡ ಮುಟ್ಟಿಸಿಬಿಡುವ ವಿಶ್ವಾಸ ಮೂಡಿಸಿದ್ದರು. ಆದರೂ ತಮ್ಮ ಅದ್ಭುತ ಆಟದ ಮೂಲಕ ಜಡೇಜಾ ತಾವು ಚೂರು ಪಾರು ಆಟಗಾರ ಖಂಡಿತಾ ಅಲ್ಲ ಎಂಬಂತೆ ಮಾಂಜ್ರೆಕರ್ಗೆ ದಿಟ್ಟ ಉತ್ತರ ನೀಡಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕ್ ಮೂವರು ಬ್ಯಾಟ್ಸ್ಮನ್ಗಳು 1 ರನ್ಗೆ ಔಟ್ ಆಗಿರುವುದು ಇದೇ ಮೊದಲಾಗಿದೆ.2015ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ನಲ್ಲಿ ವಿರಾಟ್ ಕೊಹ್ಲಿ 1 ರನ್ಗೆ ಔಟ್ ಆಗಿದ್ದರು.
ಸೆಮಿಫೈನಲ್ಗೂ ಮುನ್ನ ಆಸೀಸ್ಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
ಇದಕ್ಕೂ ಮುನ್ನ ಕಿವೀಸ್ ಬ್ಯಾಟ್ಸ್ಮನ್ಗಳ ಎದುರು ಭರ್ಜರಿ ಬೌಲಿಂಗ್ ಸಂಘಟಿಸಿದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಕೊನೆಯ 23 ಎಸೆತಗಳಲ್ಲಿ 28 ರನ್ಗಳನ್ನು ಮಾತ್ರವೇ ಬಿಟ್ಟುಕೊಟ್ಟು ಎದುರಾಳಿಯನ್ನು 240 ರನ್ ಗಡಿಯೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
{headtohead_cricket_3_4}