ರೋಚಕ ಹಂತಕ್ಕೆ ಕೊಂಡೊಯ್ದಿದ್ದರು
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ 1, ಕೆಎಲ್ ರಾಹುಲ್ 1, ವಿರಾಟ್ ಕೊಹ್ಲಿ 1, ದಿನೇಶ್ ಕಾರ್ತಿಕ್ 6 ರನ್ಗೆ ವಿಕೆಟ್ ಒಪ್ಪಿಸಿದಾಗಲೇ ಪಂದ್ಯದ ಫಲಿತಾಂಶ ನಿರ್ಧಾರವಾದಂತಿತ್ತು. ಆದರೆ 7 ಮತ್ತು 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದರು. ಟೀಮ್ ಇಂಡಿಯಾಕ್ಕೆ ಗೆಲುವಿನಾಸೆ ಮೂಡಿಸಿದ್ದರು.
ಗೆಲುವಿನಂಚಿನಲ್ಲಿ ಸೋಲು
ಸೋಲಿನಂಚಿನಲ್ಲಿದ್ದ ತಂಡವನ್ನು ಗೆಲ್ಲಿಸುವ ಹೊಣೆಗಾರಿಕೆ ಹೊತ್ತಂತೆ ಕ್ರೀಸಿಗಂಟಿನಿಂತ ಧೋನಿ, ಜಡೇಜಾ ಕ್ರಮವಾಗಿ 50, 77 ರನ್ ಸೇರಿಸಿದ್ದರು. ಅಂತಿಮ ಓವರ್ಗಳಲ್ಲಿ ದೊಡ್ಡ ಹೊಡೆತಗಳ ಅನಿವಾರ್ಯತೆ ಇದ್ದಿದ್ದರಿಂದ ಬೌಂಡರಿಗಾಗಿ ಬ್ಯಾಟ್ ಬೀಸಿದ ಜಡೇಜಾ 47.5ನೇ ಓವರ್ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ಗೆ ಕ್ಯಾಚಿತ್ತರು. ಅದಾಗಿ 48.3ನೇ ಓವರ್ನಲ್ಲಿ ಧೋನಿ ರನ್ ಔಟ್ ಆದರು. ಭಾರತದ ಫಲಿತಾಂಶ ಮತ್ತೆ ಸೋಲಿನತ್ತ ವಾಲಿತು.
ಆಲ್ ರೌಂಡರ್ ಪ್ರದರ್ಶನ
ಪಂದ್ಯದಲ್ಲಿ ಜಡೇಜಾ ನಿಜಕ್ಕೂ ಅದ್ಭುತ ಆಲ್ ರೌಂಡರ್ ಪ್ರದರ್ಶನ ನೀಡಿದ್ದರು. 34 ರನ್ನಿಗೆ 1 ವಿಕೆಟ್, 2 ಕ್ಯಾಚ್ ಮತ್ತು 1 ಅದ್ಭುತ ರನ್ ಔಟ್ ಮೂಲಕ ಫೀಲ್ಡಿಂಗ್ನಲ್ಲೂ ಭಾರತಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕವೇ ಜಡೇಜಾ ಅವರು ಮಂಜ್ರೇಕರ್ ಹೇಳಿಕೆಗೆ ತಿರುಗೇಟು ನೀಡಿದಂತಿತ್ತು. ಪಂದ್ಯದ ಬಳಿಕ ಇದನ್ನೇ ಸ್ಮರಿಸಿಕೊಂಡ ಮಂಜ್ರೇಕರ್, ಜಡೇಜಾ ಅವರನ್ನು ಕೊಂಡಾಡಿದ್ದಾರೆ.
|
ನನ್ನನ್ನು ಎಲ್ಲರ ಮುಂದೆ ತಿವಿದ
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಮಂಜ್ರೇಕರ್, 'ರವೀಂದ್ರ ಜಡೇಜಾ ತನ್ನ ಅದ್ಭುತ ಪ್ರದರ್ಶನದ ಮೂಲಕ ನನ್ನನ್ನು ಎಲ್ಲರ ಮುಂದೆ ತಿವಿದ. ಹೇಳಿಕೆ ನೀಡಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ಐಸಿಸಿ ವಿಶ್ವಕಪ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸೆಮಿಫೈನಲ್ಗೂ ಹಿಂದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸಿದ್ದು ಮಂಜ್ರೇಕರ್ಗೆ ಸರಿ ಅನ್ನಿಸಲಿಲ್ಲ. ಹೀಗಾಗಿ ಸಂಜಯ್ ವ್ಯಂಗ್ಯ ಹೇಳಿಕೆ ನೀಡಿದ್ದರು.