ಮುಂಬೈ, ಮೇ 18: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್, ಹೈ ಸ್ಕೋರಿಂಗ್ ವಿಶ್ವಕಪ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಿದ್ದೂ ಟೀಮ್ ಇಂಡಿಯಾವು ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಇರುವ ಅವಕಾಶವನ್ನು ಭಾರತದ ಬ್ಯಾಟಿಂಗ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ವಿಶ್ವಕಪ್: ಅದ್ದೂರಿ ಕ್ರಿಕೆಟ್ ಹಬ್ಬಕ್ಕೆ ಐಸಿಸಿಯಿಂದ ಅಧಿಕೃತ ಗೀತೆ ಬಿಡುಗಡೆ
ಬ್ಯಾಟಿಂಗ್ ಪಿಚ್ನಲ್ಲಿ ಪಂದ್ಯವಿರುವಾಗ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಲು ನಮ್ಮ ಬೌಲಿಂಗ್ ವಿಭಾಗ ಸಮರ್ಥವಿರಬೇಕು. ಆದ್ದರಿಂದ ಬಲಿಷ್ಠ ಬೌಲಿಂಗ್ ವಿಭಾಗ ಈ ಸಾರಿಯ ವಿಶ್ವಕಪ್ನಲ್ಲಿ ತಂಡದ ನೆರವಿಗೆ ಬರಲಿದೆ ಎಂದು 'ಗ್ರೇಟ್ ವಾಲ್ ಆಫ್ ಇಂಡಿಯಾ' ಅಭಿಪ್ರಾಯಿಸಿದ್ದಾರೆ.
The Great Wall behind the scenes 💞#rahuldravid pic.twitter.com/p8jYYdrNe7
— karthik Gowda (@karthik__katz) May 9, 2019
'ಕಳೆದ ವರ್ಷ 'ಎ' ತಂಡದ ಪ್ರವಾಸದ ವೇಳೆ ಇಂಗ್ಲೆಂಡ್ ಪರಿಸ್ಥಿತಿಯನ್ನು ನಾನು ಗಮನಿಸಿದಂತೆ, ಈ ಬಾರಿಯದ್ದು ಹೈ ಸ್ಕೋರಿಂಗ್ ವಿಶ್ವಕಪ್ ಅನ್ನಿಸಲಿದೆ. ಹಾಗಾಗಿ ಪಂದ್ಯದ ಮಧ್ಯ ಭಾಗದಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್ಗಳು ನಮ್ಮ ಪಾಲಿಗೆ ಪ್ರಮುಖರಾಗಿ ಕಾಣಿಸುತ್ತಾರೆ' ಎಂದು ದ್ರಾವಿಡ್ ನುಡಿದರು.
ಕುಂಬ್ಳೆ ಪ್ರಕಾರ ವಿಶ್ವಕಪ್ನಲ್ಲಿ ಈ ತಂಡ ಖಂಡಿತಾ ಸೆ.ಫೈನಲ್ ಪ್ರವೇಶಿಸಲಿದೆ
ಮಾತು ಮುಂದುವರೆಸಿದ ಮಾಜಿ ನಾಯಕ, 'ಎದುರಾಳಿ ತಂಡ ರನ್ ಕದಿಯುವಿಕೆಗೆ ಕಡಿವಾಣ ಹಾಕಬಲ್ಲ ಬೌಲರ್ಗಳಿರುವುದರಿಂದ ಈ ವಿಚಾರದಲ್ಲಿ ಭಾರತ ತಂಡ ಅದೃಷ್ಠಶಾಲಿ. ವಿಕೆಟ್ ಪಡೆಯಬಲ್ಲ ಜಸ್ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಅವರಂತ ಬೌಲರ್ಗಳನ್ನು ನಾವು ಹೊಂದಿದ್ದೇವೆ' ಎಂದು ವಿವರಿಸಿದರು.