ಸಹಾಗೆ ಅವಕಾಶ
'ಆರಂಭಿಕ ಟೆಸ್ಟ್ನಲ್ಲಿ ರಿಷಬ್ ಪಂತ್ಗೆ ಕೊನೆಯ ಅವಕಾಶ ನೀಡಲು ಆಯ್ಕೆ ಸಮಿತಿಗೆ ಮನಸ್ಸಿದೆ. ಆದರೆ ತಂಡ ನಿರ್ವಹಣಾ ಸಮಿತಿ (ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ) ಈ ಬಾರಿ ವೃದ್ಧಿಮಾನ್ ಸಹಾ ಅವರನ್ನು ಸರಣಿ ಆರಂಭದಿಂದಲೂ ಆಡಿಸಲು ಬಯಸಿದೆ,' ಎಂದು ಮೂಲ ತಿಳಿಸಿದೆ.
ಪಂತ್ಗೆ ಹಿನ್ನಡೆ
ವೆಸ್ಟ್ ಇಂಡೀಸ್ ಪ್ರವಾಸ ಸರಣಿ ಮುಗಿಸಿ ಭಾರತ ತಂಡ ಅಲ್ಲಿಂದ ಹೊರಡುವಾಗ ಮುಖ್ಯ ಆಯ್ಕೆದಾರ ಎಂಎಸ್ಕೆ ಪ್ರಸಾದ್ಗೆ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಕಾಣಿಸಿದ್ದರು. ಆದರೆ ಈಗ ಪಂತ್ ಬಗೆಗಿನ ಆಯ್ಕೆ ಸಮಿತಿ ನಿಲುವು ಬದಲಾಗಿದೆ.
ಪಂತ್ ಅಪ್ರತಿಮ ಸಾಧನೆ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಿಂದ ಕೈಬಿಡಲಾಗುತ್ತದೆ ಎನ್ನಲಾಗುತ್ತಿರುವ ಪಂತ್ ಟೆಸ್ಟ್ನಲ್ಲಿ ಅಪರೂಪದ ಸಾಧಕನೂ ಹೌದು. ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಏಕಮಾತ್ರ ಭಾರತೀಯ ವಿಕೆಟ್ ಕೀಪರ್ ಪಂತ್ ಎಂಬ ದಾಖಲೆ ಪಂತ್ ಹೆಸರಿನಲ್ಲಿದೆ.
ಪ್ರಭಾವಶಾಲಿಯಲ್ಲ
'ಪಂತ್ ಸಮಸ್ಯೆಯೇನೆಂದರೆ ಅವರು ಬ್ಯಾಟಿಂಗ್ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ವಿಕೆಟ್ ಕಾವಲು ಕಾಯುವಲ್ಲಿ ಅವರ ವಿಶ್ವಾಸವೂ ಕುಗ್ಗುತ್ತಿದೆ. ಅವರ ಡಿಆರ್ಎಸ್ ಸೇವೆಯೂ ಗಮನಾರ್ಹವೇನಿಲ್ಲ. ಭಾರತದ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯಲು ಕೆಲವು ಸಲ ಪರದಾಡುತ್ತಾರೆ. ಇವೆಲ್ಲದ್ದಕ್ಕೆ ಹೋಲಿಸಿದರೆ ಸಹ ಉತ್ತಮ ಆಟಗಾರ,' ಎಂದು ಮೂಲ ಹೇಳಿದೆ.